ಕೊಚ್ಚಿ ಅಕ್ಟೋಬರ್ 17: ಕರ್ನಾಟಕದ ಬಳಿಕ ಇದೀಗ ಕೇರಳದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಲೇ ಇದೆ. ಪಳ್ಳುರುತ್ತಿಯ ಚರ್ಚ್ ಶಾಲೆಯೊಂದರಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನಲೆ ಉಂಟಾದ ವಿವಾದ ಇದೀಗ ಕೋರ್ಟ್ ಮೆಟ್ಟಿಲೇರಿದ್ದು, ರಾಜಕೀಯ ಘರ್ಷಣೆಗೂ ಕಾರಣವಾಗಿದೆ. ಈ ನಡುವೆ ವಿಧ್ಯಾರ್ಥಿನಿಯ ಪೋಷಕರು ಆಕೆಯನ್ನು ಬೇರೆ ಶಾಲೆಗೆ ಸೇರಿಸುವುದಾಗಿ ತಿಳಿಸಿದ್ದಾರೆ,
ಪಿಟಿಐ ಜೊತೆ ಮಾತನಾಡಿರುವ ವಿಧ್ಯಾರ್ಥಿನಿಯ ಪೋಷಕರು ಹಿಜಾಬ್ ಘಟನೆಯಿಂದಾಗಿ ನನ್ನ ಮಗಳು ಭಾರಿ ಒತ್ತಡಕ್ಕೆ ಒಳಗಾಗಿದ್ದಾಳೆ. ಮತ್ತೆ ಆ ಶಾಲೆಗೆ ಹೋಗುವುದಿಲ್ಲ ಎಂದು ಆಕೆ ಹೇಳಿದ್ದಾಳೆ. ಆಕೆಯ ಬಯಕೆಯನ್ನು ನಾವು ಗೌರವಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ದಾಖಲಾತಿಗಾಗಿ ಬೇರೆ ಶಾಲೆಗಳನ್ನು ಕುಟುಂಬ ಸಂಪರ್ಕಿಸಿದೆ. ಒಂದು ಶಾಲೆ ದಾಖಲು ಮಾಡಿಕೊಳ್ಳುವುದಾಗಿ ಹೇಳಿದೆ. ಆದರೆ ಇನ್ನೂ ಇತರ ಆಯ್ಕೆಗಳ ಬಗ್ಗೆಯೂ ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿನಿ ಹಿಜಾಬ್ ಧರಿಸಿದ್ದು ಶಾಲಾ ಸಮವಸ್ತ್ರ ಸಂಹಿತೆಯ ಉಲ್ಲಂಘನೆ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿತ್ತು. ಅಕ್ಟೋಬರ್ 10 ರಂದು ವಿದ್ಯಾರ್ಥಿನಿಯ ಪೋಷಕರು ಕೆಲವರೊಂದಿಗೆ ಶಾಲೆಗೆ ತೆರಳಿ ಆಡಳಿತ ಮಂಡಳಿಯ ನಿಲುವನ್ನು ಪ್ರಶ್ನಿಸಿದ್ದರು. ಇದಾದ ಬಳಿಕ ಶಾಲೆಗೆ ಎರಡು ದಿನಗಳ ರಜೆ ಘೋಷಿಸಲಾಗಿತ್ತು.
ಈ ನಡುವೆ ಈ ವಿವಾದ ಇದೀಗ ಕೇರಳ ಹೈಕೋರ್ಟ್ ಮೆಟ್ಟಿರೇಲಿದ್ದು, ಕೇರಳ ಸರಕಾರ ಹಿಜಾಬ್ ಧರಿಸಿ ವಿಧ್ಯಾರ್ಥಿನಿಗೆ ಅವಕಾಶ ನೀಡಬೇಕೆಂದು ನೀಡಿರುವ ಆದೇಶದ ವಿರುದ್ದ ಶಾಲೆ ಹೈಕೋರ್ಟ್ ಮೆಟ್ಟಿಲೇರಿದೆ. ಶಾಲೆ ಸಿಬಿಎಸ್ ಸಿ ಆದ ಕಾರಣ ರಾಜ್ಯ ಸರಕಾರಕ್ಕೆ ಶಾಲೆಯ ನಿಯಮಗಳ ಮಧ್ಯಪ್ರವೇಶಿಸುವ ಯಾವುದೇ ಹಕ್ಕು ಇಲ್ಲ ಎಂದು ಶಾಲೆ ಹೈಕೋರ್ಟ್ ಗೆ ತಿಳಿಸಿದೆ.