LATEST NEWS
ಕರಾವಳಿಯಲ್ಲಿ ಮತ್ತೆ ತಲ್ವಾರ್ ಕಾಳಗ-ಯುವಕನ ಹತ್ಯೆ ಯತ್ನ
ಮಂಗಳೂರು : ನಗರದ ಯುನಿಟಿ ಆಸ್ಪತ್ರೆ ಸಮೀಪ ಯುವಕನ ಮೇಲೆ ತಲವಾರು ದಾಳಿ ನಡೆದಿದೆ.
ಸೋಮವಾರ ರಾತ್ರಿ ಈ ದಾಳಿ ನಡೆದಿದ್ದು, ನೌಶಾದ್ (30) ಗಾಯಗೊಂಡ ಯುವಕ ಎಂದು ತಿಳಿದುಬಂದಿದೆಇತ್ತೀಚೆಗೆ ಕಂದಾವರ ಮಸೀದಿ ಸಮೀಪ ಚೂರಿ ಇರಿತಕ್ಕೊಳಗಾಗಿದ್ದ ಅಬ್ದುಲ್ ಅಝೀಝ್ ಅವರ ಅಳಿಯ ನೌಶಾದ್ ಅವರ ಮೇಲೆ ತಲವಾರಿನಿಂದ ದಾಳಿ ಮಾಡಲಾಗಿದೆ. ಅವರ ಎದೆ ಭಾಗಕ್ಕೆ ಗಾಯವಾಗಿದ್ದು, ಕಾರಿನಲ್ಲಿ ಬಂದಿದ್ದ ತಂಡ ಈ ದಾಳಿ ನಡೆಸಿರುವುದಾಗಿ ಹೇಳಲಾಗುತ್ತಿದೆ.
ನವೆಂಬರ್ 15ರಂದು ಗುರುಪುರದ ಕೈಕಂಬ ಬಳಿಯ ಕಂದಾವರ ಮಸೀದಿ ಹತ್ತಿರ ಅಬ್ದುಲ್ ಅಜೀಜ್ ಎಂಬವರ ಕೊಲೆಗೆ ಯತ್ನ ನಡೆದಿತ್ತು. ಮಸೀದಿಯ ಕಮಿಟಿ ವಿಚಾರದ ಹಿನ್ನೆಲೆ ಮೂವರು ಯುವಕರು ಅಬ್ದುಲ್ ಅಜೀಜ್ ಮೇಲೆ ಕೊಲೆ ಯತ್ನ ನಡೆದಿತ್ತು. ಇದೀಗ ಅಬ್ದುಲ್ ಅಜೀಜ್ ಅವರ ಮಗಳ ಪತಿಯಾಗಿರುವ ನೌಷಾದ್ ಮೇಲೆ ದುಷ್ಕರ್ಮಿಗಳು ತಲ್ವಾರ್ ಬೀಸಿದ್ದಾರೆ.
You must be logged in to post a comment Login