Connect with us

    LATEST NEWS

    ಕೇರಳದ ತಿರುವನಂತಪುರ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಶೇಧ….

    ಕೇರಳದ ತಿರುವನಂತಪುರ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ  ಭಕ್ತರ ಪ್ರವೇಶಕ್ಕೆ ನಿಶೇಧ….

    ತಿರುವನಂತಪುರ, ಅಕ್ಟೋಬರ್ 09: ದೇಶದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾದ ಕೇರಳ ರಾಜ್ಯದ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಶೇಧ ಹೇರಲಾಗಿದೆ.

    ದೇವಸ್ಥಾನದ ಹಲವು ಸಿಬ್ಬಂದಿಗಳಲ್ಲಿ ಹಾಗೂ ದೇವಳದ ಇಬ್ಬರು ಮುಖ್ಯ ಅರ್ಚಕರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾದ ಹಿನ್ನಲೆಯಲ್ಲಿ ಈ ನಿಶೇಧ ಜಾರಿಗೆ ತರಲಾಗಿದೆ.

    ಅಕ್ಟೋಬರ್ 15 ರ ವರೆಗೆ ದೇವಸ್ಥಾನಕ್ಕೆ ಭಕ್ತರ ಭೇಟಿಗೆ ಅವಕಾಶವನ್ನು ನಿರಾಕರಿಸಲಾಗಿದೆ.

    ಕೇರಳದ ತಿರುವನಂತಪುರಂ ನಲ್ಲಿರುವ ಈ ದೇವಸ್ಥಾನ ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಒಂದಾಗಿದ್ದು, ಇಲ್ಲಿನ ಚಿನ್ನಾಭರಣಗಳ ಕೊಠಡಿಗಳ ವಿಚಾರ ಇಡೀ ವಿಶ್ವದ ಗಮನ ಸೆಳೆದಿತ್ತು.

    ಕೋವಿಡ್ ಅನ್ ಲಾಕ್ ಮಾರ್ಗಸೂಚಿ ಜಾರಿಗೆ ಬಂದ ಬಳಿಕ ಕೇರಳ ಸರಕಾರ ಈ ದೇವಸ್ಥಾನದ ಒಳಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು.

    ಆದರೆ ಇದೀಗ ದೇವಸ್ಥಾನದ ಅರ್ಚಕರಲ್ಲೇ ಕೊರೊನಾ ಪತ್ತೆಯಾದ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply