Connect with us

    LATEST NEWS

    ಕೈಕಾಲು ತೊಳೆಯಲು ನದಿಗಿಳಿದಿದ್ದ ಬಾಲಕ ಸಾವು

    ಮಂಗಳೂರು: ಕಾಲು ತೊಳೆಯಲೆಂದು ನದಿಗೆ ಇಳಿದಿದ್ದ ಬಾಲಕ ನದಿಗೆ ಬಿದ್ದು ಮೃತಪಟ್ಟ ಘಟನೆ ಬೋಳಿಯಾರು ಗ್ರಾಮದಲ್ಲಿ ನಡೆದಿದೆ. ಕೋಣಾಜೆ ಸಮೀಪದ ಬೋಳಿಯಾರಿನ ಧರ್ಮನಗರ ಸಮೀಪದ ಜಲಕದಕಟ್ಟೆ ಎಂಬಲ್ಲಿ ಘಟನೆ ನಡೆದಿದ್ದು ನಡುಪದವು ನಿವಾಸಿ ಫಾಝಿಲ್(15) ಮೃತ ಬಾಲಕ.

    ತೋಟದ ಕೆಲಸಕ್ಕೆ ತೆರಳಿದ್ದ ಫಾಝಿಲ್, ತೆಂಗಿನಕಾಯಿ ಹೆಕ್ಕಿದ ಬಳಿಕ ತೋಟದ ಪಕ್ಕವೇ ಹರಿಯುವ ನದಿಗೆ ತೆರಳಿದ್ದ. ಕೈಕಾಲು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ಬಾಲಕನ ರಕ್ಷಣೆಗಾಗಿ ಪ್ರಯತ್ನಿಸಿದ್ದಾರೆ. ದೇಹವನ್ನು ನದಿಯಿಂದ ಮೇಲಕ್ಕೆತ್ತುವಷ್ಟರಲ್ಲಿ ಸಾವನ್ನಪ್ಪಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊಣಾಜೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply