Connect with us

    LATEST NEWS

    ನೀರೆಬೈಲೂರಿನಲ್ಲಿ ವಾಹನ ಡಿಕ್ಕಿ ಹೊಡೆದು ಸಾವನಪ್ಪಿದ ಕಾಡುಪಾಪ

    ಉಡುಪಿ : ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ನೀರೆಬೈಲೂರುನಲ್ಲಿ ಕಾಡುಪಾಪ ವೊಂದು ಸತ್ತು ಬಿದ್ದಿದೆ. ರಸ್ತೆ ದಾಟುವ ವೇಳೆ ವಾಹನ ಡಿಕ್ಕಿ ಹೊಡೆದಿರಬಹುದೆಂದು ಎಂದು ಶಂಕಿಸಲಾಗಿದೆ.


    ರಾತ್ರಿ ವೇಳೆ ಕಾಡುಪಾಪಗಳು ಹೆಚ್ಚಾಗಿ ಕಾರ್ಕಳ, ಹೆಬ್ರಿ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಕಾಡು ಪಾಪಗಳು ನಿರುಪದ್ರವಿಗಳು. ಬೆಳಗ್ಗಿನ ಜಾವ ರಸ್ತೆ ಬದಿಯಲ್ಲಿ ಕಾಡುಪಾಪ ಕಳೇಬರ ಕಾಣಿಸಿಕೊಂಡಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ವಲಯ ಅರಣ್ಯಾಧಿಕಾರಿಗಳು ಕಾಡುಪಾಪದ ಮರಣೋತ್ತರ ಪರೀಕ್ಷೆ ನಡೆಸಿ ಸರಕಾರದ ನಿರ್ದೇಶನದಂತೆ ಸುಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply