Connect with us

    LATEST NEWS

    ಯಾವನೋ ಅವನು ಶ್ರೀನಿವಾಸ ಶೆಟ್ಟಿ ಅವನ ಮುಖಾನೆ ನಾನು ನೋಡಿಲ್ಲ – ಸಿದ್ದರಾಮಯ್ಯ

    ಯಾವನೋ ಅವನು ಶ್ರೀನಿವಾಸ ಶೆಟ್ಟಿ ಅವನ ಮುಖಾನೆ ನಾನು ನೋಡಿಲ್ಲ – ಸಿದ್ದರಾಮಯ್ಯ

    ಬೈಂದೂರು ಅಕ್ಟೋಬರ್ 25: ಯಾವಾನೊ ಅವನು ಶ್ರೀನಿವಾಸ ಶೆಟ್ಟಿ, ಅವನ ಮುಖಾನೇ ನಾನು ನೋಡಿಲ್ಲ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಏಕವಚನದಲ್ಲಿ ಬೈದ ಮಾಜಿ ಸಿಎಂ ಸಿದ್ದರಾಮಯ್ಯ.

    ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭ್ಯ ರಾಜಕಾರಣಿ ಎಂದು ಕರೆಯಲ್ಪಡುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
    ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ನೈತಿಕತೆ ಇಲ್ಲ. ರೈತರ ಪರ ಕಾಳಜಿ ಇಲ್ಲ. ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ ಎಂದು ಉಡುಪಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಯುಡಿಯೂರಪ್ಪ ಒಬ್ರೇನಾ ಹಿಂದು ? ನಾವೆಲ್ಲಾ ಹಿಂದೂಗಳಲ್ವ, ಮಧು, ಜಯಮಾಲ, ಪ್ರಮೊದ್ , ಸೊರಕೆ ಎಲ್ಲರೂ ಹಿಂದೂ ಅಲ್ವಾ, ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಮಾತ್ರ ಹಿಂದೂನಾ? ಓಟು ಕೇಳುವಾಗ ಹಿಂದೂ
    ಆಮೇಲೆ ಹಿಂದೂಗಳು ಹಿಂದೆ ನಾಯಕರೆಲ್ಲ ಮುಂದೆ ಎಂದು ಹೇಳಿದರು.

    ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ನೀಡಿದ ಒಂದೇ ಒಂದು ಆಶ್ವಾಸನೆಯನ್ನೂ ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ಮೂರು ಚುನಾವಣೆ ಅನಗತ್ಯವಾಗಿ ಬಂದಿದೆ. ಯಡಿಯೂರಪ್ಪ ಸಿಎಂ ಆಗುವ ಆಸೆಯಿಂದ ಈ ಚುನಾವಣೆ ಆಗ್ತಾಯಿದೆ. ಬಿಎಸ್ ವೈ ಎರಡೂವರೆ ದಿನ ಸಿಎಂ ಆದ್ರು ಇದು ಪ್ರಜಾಪ್ರಭುತ್ವ ವಿರೋಧಿ ಬೆಳವಣಿಗೆ ಮತದಾರರಿಗೆ ಬಿಎಸ್ ವೈ ಮತ್ತು ಮಗ ಅಪಮಾನ ಮಾಡಿದ್ದಾರೆ.

    ಮೋದಿ ಮುಂದೆ ರಾಜ್ಯ ನಾಯಕರು ಬಾಯಿಯನ್ನೇ ಬಿಡಲ್ಲ. ಈ ಗಿರಾಕಿಗಳಿಗೆ ಮೋದಿ ಮುಂದೆ ಬಾಯಿ ಬರಲ್ಲ. ಸಾಲಮನ್ನಾ ಮಾಡದೇ ಇರೋಕೆ ಮೋದಿಗೆ ಯಾವ ರೋಗ ಬಂದಿದೆ. ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಈ ಬಾರಿ ಎಲ್ಲಾ ಅರಾಜಕತೆಗೆ ಜನ ಉತ್ತರ ಕೊಡ್ತಾರೆ ಸಮ್ಮಿಶ್ರ ಅಭ್ಯರ್ಥಿ ಮಧು ಬಂಗಾರಪ್ಪ ಈ ಬಾರಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply