LATEST NEWS
ದಕ್ಷಿಣಕನ್ನಡ ಜಿಲ್ಲೆಯವರು ಬ್ಯಾಂಕ್ ಕಟ್ಟಿ ಬೆಳೆಸಿದರು…ಗುಜರಾತ್ನವರು ಈ ಬ್ಯಾಂಕ್ಗಳನ್ನು ನುಂಗಿ ನೀರು ಕುಡಿದರು
ಬೆಂಗಳೂರು ಫೆಬ್ರವರಿ 12 : ದಕ್ಷಿಣಕನ್ನಡದವರು ಬೇವರು ಸುರಿಸಿ ಅಡಿಕೆ ಬೆಳೆದರೆ ಗುಜರಾತ್ ನವರು ಅಡಿಕೆ ತಿಂದು ಬೇವರು ಸುರಿಸುತ್ತಾರೆ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ.
ಅಮಿತ್ ಶಾ ಹೇಳಿಕೆಗೆ ಟ್ವೀಟ್ ಮಾಡಿರುವ ಅವರು ದಕ್ಷಿಣ ಕನ್ನಡದವರು ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ಗಳನ್ನು ಕಟ್ಟಿ ಬೆಳೆಸಿದರು. ಗುಜರಾತ್ನವರು ಈ ಬ್ಯಾಂಕ್ಗಳನ್ನು ನುಂಗಿ ನೀರು ಕುಡಿದರು. ನಮ್ಮವರಿಗೆ ಕಟ್ಟುವುದು, ಬೆಳೆಸುವುದು ಗೊತ್ತು, ನಿಮಗೆ ಮಾರುವುದು, ಮುಳುಗಿಸುವುದು ಮಾತ್ರ ಗೊತ್ತು’ ಎಂದು ಟ್ವೀಟ್ ಮಾಡಿದ್ದಾರೆ.
You must be logged in to post a comment Login