LATEST NEWS
ಕುಲಶೇಖರ – ಶಾರ್ಟ್ ಸರ್ಕ್ಯೂಟ್ ನಿಂದಾಗಿ ನಂದಿನಿ ಹಾಲಿನಬೂತ್ ಗೆ ಬೆಂಕಿ- 2 ಲಕ್ಷಕ್ಕೂ ಅಧಿಕ ನಷ್ಟ
ಮಂಗಳೂರು ಜುಲೈ31: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ನಂದಿನಿ ಹಾಲಿನ ಬೂತ್ ಒಂದು ಬೆಂಕಿಗಾಹುತಿಯಾದ ಘಟನೆ ಕುಲಶೇಖರದ ಸಿಲ್ವರ್ ಗೇಟ್ ಬಳಿ ನಡೆದಿದೆ.
ವಿಕಲಚೇತನರಾಗಿರುವ ವಸಂತ ಕುಮಾರ್ ಎಂಬವರಿಗೆ ಸೇರಿದ ವಿಜೇತ್ ನಂದಿನಿ ಮಿಲ್ಕ್ ಪಾರ್ಲರ್ ಇದಾಗಿದ್ದು, ರಾತ್ರಿ ಅಂಗಡಿ ಬಾಗಿಲು ಹಾಕಿದ ನಂತರ ಮಧ್ಯರಾತ್ರಿಯ ಸಂದರ್ಭ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು. ತಡರಾತ್ರಿ ಸುಮಾರು 2:25ರ ಬಳಿಕ ಕದ್ರಿ ಅಗ್ನಿಶಾಮಕ ಠಾಣೆಗೆ ಬಂದ ಕರೆಯಂತೆ ಸ್ಥಳಕ್ಕೆ ತೆರಳಿದಾಗ ಹಾಲಿನ ಬೂತ್ ಭಾಗಶಃ ಸುಟ್ಟು ಹೋಗಿತ್ತು.
ಬೂತ್ನೊಳಗಿದ್ದ ಸುಮಾರು 500 ಲೀ.ನಷ್ಟು ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳ ಸಹಿತ ಎಲ್ಲಾ ವಸ್ತುಗಳಿಗೆ ಹಾನಿಯಾಗಿದೆ. ಇದರಿಂದ 2:50 ಲಕ್ಷ ರೂ.ಗಿಂತಲೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
You must be logged in to post a comment Login