LATEST NEWS
ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ – ಶೋಭಾ ಕರಂದ್ಲಾಜೆ
ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ – ಶೋಭಾ ಕರಂದ್ಲಾಜೆ
ಉಡುಪಿ ನವೆಂಬರ್ 16: ರಾಜ್ಯದ ಸಮ್ಮಿಶ್ರ ಸರಕಾರ ಅಭಿವೃದ್ದಿ ಕೆಲಸ ಮಾಡುವುದು ಬಿಟ್ಟು ಕೇವಲ ವಿಪಕ್ಷ ನಾಯಕರನ್ನು ಟಾರ್ಗೇಟ್ ಮಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಸಮ್ಮಿಶ್ರ ಸರಕಾರದ ವಿರುದ್ದ ಎದ್ದಿರುವ ಅಭಿವೃದ್ಧಿ ಕೆಲಸದ ಕೂಗು ಮುಚ್ಚಿಹಾಕಲು ಯತ್ನ ಮಾಡುತ್ತಿದ್ದು, ಕೇವಲ ವಿಪಕ್ಷ ನಾಯಕರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ರೆಡ್ಡಿ ನ್ಯಾಯಕ್ಕಾಗಿ ಕೋರ್ಟಲ್ಲಿ ಫೈಟ್ ಮಾಡುತ್ತಿದ್ದಾರೆ.
ಜನಾರ್ದನ ರೆಡ್ಡಿಯನ್ನು ನಾವು ಸಮರ್ಥಿಸುವುದಿಲ್ಲ , ರೆಡ್ಡಿಯನ್ನು ಸಮರ್ಥಿಸುವ ಅಗತ್ಯ ನಮಗೆ ಇಲ್ಲ ಆದರೆ ತರಾತುರಿ ಬಂಧನ ಮಾಡಿದ್ಯಾಕೆ . ಇದು ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಜನಾರ್ದನ ರೆಡ್ಡಿ ಹೇಳುತ್ತಿರುವುದು ಸತ್ಯ ಅನ್ನಿಸುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸಾಲಮನ್ನಾ ಘೋಷಣೆಯಾದರೂ ರೈತರ ಆತ್ಮಹತ್ಯೆ ನಿರಂತರ ನಡೆಯುತ್ತಿದೆ. ರಾಜ್ಯದ ಪಾಲಿಗೆ ಸರ್ಕಾರ ಉಳಿದಿಲ್ಲ, ಹುಟ್ಟಿದ ತಕ್ಷಣ ಸಮ್ಮಿಶ್ರ ಸರ್ಕಾರ ಸತ್ತಿದೆ. ಅಭಿವೃದ್ಧಿ ಇಲ್ಲದೆ ರಾಜ್ಯದ ಜನ ಬಡವಾಗಿದ್ದಾರೆ ಎಂದು ಹೇಳಿದರು.
You must be logged in to post a comment Login