Connect with us

    LATEST NEWS

    ಶಿರೂರು ಶ್ರೀಗಳು ಮಠಾಧೀಶ ಹುದ್ದೆಯಿಂದ ನಿವೃತ್ತಿ ಹೊಂದುವುದು ಸೂಕ್ತ – ಪೇಜಾವರ ಶ್ರೀ

    ಶಿರೂರು ಶ್ರೀಗಳು ಮಠಾಧೀಶ ಹುದ್ದೆಯಿಂದ ನಿವೃತ್ತಿ ಹೊಂದುವುದು ಸೂಕ್ತ – ಪೇಜಾವರ ಶ್ರೀ

    ಉಡುಪಿ ಜುಲೈ 5: ಶಿರೂರು ಶ್ರೀಗಳು ಯತಿಧರ್ಮದಲ್ಲಿಲ್ಲದ ಕಾರಣ ಅವರು ಮಠಾಧೀಶ ಹುದ್ದೆಯಿಂದ ನಿವೃತ್ತಿ ಪಡೆದುಕೊಳ್ಳುವುದೇ ಸೂಕ್ತ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

    ಶಿರೂರು ಶ್ರೀಗಳ ಪಟ್ಟದ ದೇವರ ವಿವಾದದ ಬಗ್ಗೆ ಮಾತನಾಡಿದ ಅವರು ಯತಿ ಧರ್ಮದಲ್ಲಿದ್ದವರಿಗೆ ಮಾತ್ರ ಪೂಜೆಯ ಹಕ್ಕು ಇರುತ್ತದೆ ಎಂದು ಹೇಳಿದರು. ಅಲ್ಲದೇ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಸನ್ಯಾಸ ಧರ್ಮ ಪಾಲಿಸುತ್ತಿಲ್ಲ ಎನ್ನುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಸನ್ಯಾಸಿಯೇ ಅಲ್ಲದವರು ಪಟ್ಟದ ದೇವರಿಗೆ ಪೂಜೆ ಮಾಡುವುದು ಸಂಪ್ರದಾಯವಲ್ಲ, ಹೀಗಾಗಿ ದೇವರನ್ನು ನೀಡಿಲ್ಲ. ಇದಕ್ಕೆ ಬೇರೆ ಯಾವುದೇ ಕಾರಣಗಳಿಗಿಲ್ಲ ಎಂದು ಸ್ಪಷ್ಟಪಡಿಸಿದರು.

    ಪುತ್ತಿಗೆ ಶ್ರೀ ಸುಗಣೇಂದ್ರ ತೀರ್ಥ ಸ್ವಾಮಿಜಿ ಯತಿ ಧರ್ಮದಲ್ಲಿದ್ದಾರೆ, ಅವರು ವಿದೇಶಕ್ಕೆ ತೆರಳಿದ್ದಾರೆ ಎನ್ನುವುದೊಂದೇ ಅಪಾದನೆ. ಹೀಗಾಗಿ ಎರಡೂ ಪ್ರಕರಣಗಳು ಭಿನ್ನ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply