Connect with us

    LATEST NEWS

    ಕೊರಗಜ್ಜನಿಗೆ ಅವಮಾನ ಮಾಡಿದವರನ್ನು ಜಮಾತಿನಿಂದ ಬಹಿಷ್ಕರಿಸಿ – ಶರಣ್ ಪಂಪ್ವೆಲ್

    ಮಂಗಳೂರು ಜನವರಿ 11: ಮದುವೆ ಕಾರ್ಯಕ್ರಮದಲ್ಲಿ ಕೊರಗಜ್ಜನಿಗೆ ಅವಮಾನ ಮಾಡಿರುವವರನ್ನು ಜಮಾತ್ ನಿಂದ ಬಹಿಷ್ಕಾರ ಹಾಕಿ ಅವರ ವಿರುದ್ದ ಪತ್ವಾ ಹೊರಡಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮುಸ್ಲಿಂ ಮುಖಂಡರಿಗೆ ಸವಾಲು ಹಾಕಿದ್ದಾರೆ.


    ಮಂಗಳೂರಿನಲ್ಲಿ ಮಾತನಾಡಿದ ಅವರು ಮದುವೆ ಕಾರ್ಯಕ್ರಮದಲ್ಲಿ ಕೊರಗಜ್ಜನಿಗೆ ಅವಮಾನ ಮಾಡಿರುವುದು ಹಿಂದೂಗಳ ಧಾರ್ಮಿಕ ನಂಬಿಕೆಗೆ ಘಾಸಿಯನ್ನುಂಟು ಮಾಡಿದೆ. ಸ್ವಾಮಿ ಕೊರಗಜ್ಜನ ಲಕ್ಷಾಂತರ ಭಕ್ತರ ಕಣ್ಣಲ್ಲಿ ನೀರು ಹರಿಸಿದೆ. ಒಂದು ಕಡೆ ಖಂಡಿಸುವ ನಾಟಕವಾಡಿ, ಮತ್ತೊಂದೆಡೆ ಈ ಕೃತ್ಯವನ್ನು ಸಮರ್ಥಿಸುವ ಕೆಲಸ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮುಸ್ಲಿಂ ಮುಖಂಡರು ಈ ಕೃತ್ಯ ನಡೆಸಿದವರ ಮನೆಗೆ ತೆರಳಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿರುವುದು ಅತ್ಯಂತ ಖಂಡನೀಯ ಎಂದರು.
    ಮುಸಲ್ಮಾನರಿಗೆ ನಿಜವಾದ ಕಳಕಳಿ ಇದ್ದಲ್ಲಿ ತಪ್ಪಿತಸ್ಥರ ವಿರುದ್ಧ ಫತ್ವಾ ಹೊರಡಿಸಲಿ. ಇಲ್ಲವಾದಲ್ಲಿ ಜಮಾತೆಯಿಂದ ಹೊರಗೆ ಹಾಕುವ ಕೆಲಸ ಮಾಡಲಿ. ಮುಸ್ಲಿಂ ಸಮುದಾಯದ ಮುಖಂಡರಿಗೆ ಇದು ನನ್ನ ಸವಾಲು ಎಂದು ಶರಣ್ ಪಂಪ್‌ವೆಲ್ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply