Connect with us

    LATEST NEWS

    ಮುಂದಿನ ತಿಂಗಳು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಅವಕಾಶ

    ಮುಂದಿನ ತಿಂಗಳು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಅವಕಾಶ

    ಕೇರಳ ಅಗಸ್ಟ್ 30: ಜಲಪ್ರಳಯದಿಂದ ಹಾಳಾಗಿರುವ ಸಂಪರ್ಕ ರಸ್ತೆಯನ್ನು ದುರಸ್ಥಿಗೊಳಿಸಿ ಮುಂದಿನ ತಿಂಗಳು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪದ್ಮಕುಮಾರ್ ತಿಳಿಸಿದ್ದಾರೆ.

    ಪಂಪೆಯಲ್ಲಿರುವ ಎರಡೂ ಸೇತುವೆಗಳು ಹಾನಿಯಾಗಿದ್ದು, ಭಾರತೀಯ ಸೇನೆಯ ಮೂಲಕ ಇಲ್ಲಿ ಮೂರು ತಾತ್ಕಾಲಿಕ ಸೇತುವೆಗಳನ್ನು ನಿರ್ವಿುಸಲಾಗುತ್ತದೆ. ಇದರಲ್ಲಿ ಎರಡು ಸೇತುವೆಗಳನ್ನು ಶೀಘ್ರ ಪೂರ್ಣಗೊಳಿಸಿ ಬಳಕೆಗೆ ಮುಕ್ತಗೊಳಿಸಲಾಗುವುದು. ಹಾನಿಯಾಗಿರುವ ಕಟ್ಟಡ, ರಸ್ತೆ ಮತ್ತಿತರ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.

    ಸದ್ಯ ಭಕ್ತರ ವಾಹನಗಳಿಗೆ ಪಂಪೆಯವರೆಗೆ ತೆರಳಲು ಅವಕಾಶವಿಲ್ಲ, ನೀಲಕ್ಕಲ್​ನಲ್ಲಿ ದೇವಸ್ವಂ ಬೋರ್ಡ್ ಅಧೀನದಲ್ಲಿರುವ 300 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಂದ ಕೆಎಸ್​ಆರ್​ಟಿಸಿ ಬಸ್ ಮೂಲಕ ಪಂಪೆಗೆ ಹೋಗಲು ಭಕ್ತರಿಗೆ ಅವಕಾಶವಿದೆ. ನವೆಂಬರ್ 15ರೊಳಗೆ ಶಬರಿಮಲೆಯಲ್ಲಿ ಎಲ್ಲ ನಿರ್ಮಾಣ ಕಾರ್ಯ ಪೂರ್ತಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply