DAKSHINA KANNADA
ಉಪ್ಪುಕಳದಲ್ಲಿ ಒಂದೇ ದಿನದಲ್ಲಿ ಸಂಪರ್ಕ ಸೇತುವೆ ನಿರ್ಮಿಸಿ ಸೇವಾ ಭಾರತಿ ತಂಡ
ಸುಳ್ಯ , ಆಗಸ್ಟ್ 06: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಪ್ಪುಕಳದಲ್ಲಿ ಒಂದೇ ದಿನದಲ್ಲಿ ಸಂಪರ್ಕ ಸೇತುವೆ ನಿರ್ಮಿಸಿ ಸೇವಾ ಭಾರತಿ ತಂಡ ಗ್ರಾಮದ ಜನರಿಗೆ ನೆರವಾದೆ.
ಸುಳ್ಯದ ಉಪ್ಪುಕಳ ಎನ್ನುವ ಕುಗ್ರಾಮದ ಸೇತುವೆ ಕೊಚ್ಚಿ ಕಳೆದ ಒಂದು ವಾರದೆಂದ ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿದ್ದ 12 ಕುಟುಂಬಗಳು, ಈ ಸೇತುವೆಯಿಂದಾಗಿ ತಮ್ಮ ಅವಶ್ಯಕತೆಗಳನ್ನು ಪೂರೈಸುವಂತಾಗಿದೆ.
ಉಪ್ಪುಕಳ ಅಯ್ಯಪ್ಪ ಮಂದಿರದ ಬಳಿ ಹರಿಯುವ ಹಳ್ಳಕ್ಕೆ ಇದ್ದ ಅಡಿಕೆ ಮರದ ಸೇತುವೆ ಮೇಘಸ್ಪೋಟಕ್ಕೆ ಸಿಲುಕಿ ನೀರು ಪಾಲಾಗಿತ್ತು.
ಇದೀಗ ಸುಮಾರು 50 ಫೀಟ್ ಅಗಲದಲ್ಲಿ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿದ್ದು, ಸುಳ್ಯ ಸೇವಾ ಭಾರತಿಯ 30 ಜನರ ತಂಡ ಕಾಡಿನಿಂದ ಬಿದಿರಿನ ಬೆತ್ತ ತಂದು ಅಡಿಕೆ ಮರ ಹಾಸಿ ಸೇತುವೆ ನಿರ್ಮಾಣ ಮಾಡಿದೆ.
You must be logged in to post a comment Login