LATEST NEWS
ಸೋಮೇಶ್ವರ : ನೋಡ ನೋಡುತ್ತಿದ್ದಂತೆ ಮನೆ ಸಮುದ್ರಪಾಲು !
ಮಂಗಳೂರು, ಜೂನ್ 16 : ಮಂಗಳೂರು ಹೊರವಲಯದ ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಜೀವ ರಕ್ಷಕ ವೃತ್ತಿಯಲ್ಲಿದ್ದ ಮೋಹನ್ ಎಂಬವರ ಮನೆ ಸಂಪೂರ್ಣ ಕಡಲು ಪಾಲಾಗಿದೆ.
ಸೋಮೇಶ್ವರ ದೇವಸ್ಥಾನದ ಬಳಿಯ ಕಡಲ ತೀರದಲ್ಲಿ ಜೀವ ರಕ್ಷಕ ವೃತ್ತಿಯಲ್ಲಿರುವ ಮೋಹನ್ ಅವರ ಮನೆ ಕಳೆದ ವರ್ಷ ಭಾಗಶಃ ಸಮುದ್ರ ಪಾಲಾಗಿತ್ತು. ಈ ಬಾರಿ ಮತ್ತೆ ಕಡಲು ಪ್ರಕ್ಷುಬ್ಧ ಆಗಿದ್ದು ನಿನ್ನೆ ಸಂಜೆ ಮನೆಮಂದಿ ನೋಡ ನೋಡುತ್ತಿದ್ದಂತೆ ತಾವು ಹುಟ್ಟಿ ಬೆಳೆದ ಮನೆ ನೀರು ಪಾಲಾಗಿದೆ. ಸೋಮೇಶ್ವರ ಉಚ್ಚಿಲದಲ್ಲಿ ಅವೈಜ್ಞಾನಿಕ ಬ್ರೇಕ್ ವಾಟರ್ ಕಾಮಗಾರಿಯಿಂದಾಗಿ ಈ ಭಾಗದಲ್ಲಿ ಕಡಲ್ಕೊರೆತ ಹೆಚ್ಚುತ್ತಿದ್ದು ಸ್ಥಳೀಯರು ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
You must be logged in to post a comment Login