Connect with us

    LATEST NEWS

    ತಾಯಿ ಬುದ್ದಿವಾದ – ಮಗ ಆತ್ಮಹತ್ಯೆ

    ಮಂಗಳೂರು ಸೆಪ್ಟೆಂಬರ್ 11: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ನಡೆದಿದೆ. ಮಂಗಳೂರಿನ ಪ್ರತಿಷ್ಠಿತ ಎಸ್ ಡಿಎಂ ಕಾಲೇಜಿನ ಬಿಬಿಎ ವಿಭಾಗದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ .

    ಬಿಬಿಎ ವಿಭಾಗದ 4 ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಭಿಷೇಕ್ ಇಂದು ಮುಂಜಾನೆ ಅತ್ತಾವರದ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇಂದು ಮುಂಜಾನೆ ತನ್ನ ತಾಯಿಯ ಮುಂದೆ ಹಣದ ಬೇಡಿಕೆ ಇಟ್ಟಿದ್ದ ಅಭಿಷೇಕ್ ಗೆ ತಾಯಿ ಬುದ್ಧಿವಾದ ಹೇಳಿದ್ದಾರೆ. ನಂತರ ತನ್ನ ತಾಯಿಯನ್ನು ಹತ್ತಿರದಲ್ಲೆ ಇರುವ ಬ್ಯಾಂಕಿಗೆ ಬಿಟ್ಟು ಮನೆಗೆ ಮರಳಿದ ಅಭಿಷೇಕ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ .

    Share Information
    Advertisement
    Click to comment

    You must be logged in to post a comment Login

    Leave a Reply