Connect with us

    KARNATAKA

    ಹಳ್ಳಕ್ಕೆ ಬಿದ್ದ ಶಾಲಾ ಬಸ್:‌ 25 ವಿದ್ಯಾರ್ಥಿಗಳು ಪಾರು

    ಬೆಂಗಳೂರು, ಆಗಸ್ಟ್ 04: ಭಾರೀ ಮಳೆ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಹಳ್ಳಕ್ಕೆ ಬಿದ್ದ ಘಟನೆ ನಗರದ ಹೊರವಲಯದ ಮಾಗಡಿ ಬಳಿ ಸಂಭವಿಸಿದೆ. ಬಸ್‌ ನಲ್ಲಿದ್ದ 25 ಶಾಲಾ ಮಕ್ಕಳು ಪಾರಾಗಿದ್ದಾರೆ.

    ಮಾಗಡಿಯ ಹುಲಿಕಲ್‌ ಬಳಿ ಕುದೂರು ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಸ್ಥಳೀಯರು ಸಮಯಪ್ರಜ್ಞೆಯಿಂದ ಶಾಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುವಾಗ ಹುಲಿಕಲ್‌ ಬಳಿಯ ಹಳ್ಳಕ್ಕೆ ಬಿದ್ದಿದೆ. ಕೆಲವು ಮಕ್ಕಳಿಗೆ ಸಣ್ಣಪುಟ್ಟ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    ಕುದೂರು ಗ್ರಾಮದ ಮಾನಸ ಗಂಗೋತ್ರಿ ಶಾಲೆಯ ಬಸ್‌ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಕ್ಕಳು ಗಾಬರಿಗೊಂಡಿದ್ದು, ಘಟನಾ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply