Connect with us

LATEST NEWS

ಗುಜರಿ ವಸ್ತುಗಳ ದಾಸ್ತಾನು ಕೊಠಡಿಗೆ ಬೆಂಕಿ

ಗುಜರಿ ವಸ್ತುಗಳ ದಾಸ್ತಾನು ಕೊಠಡಿಗೆ ಬೆಂಕಿ

ಉಡುಪಿ ನವೆಂಬರ್ 1 : ಬೆಳ್ಳಂಬೆಳಿಗ್ಗೆ ಗುಜರಿ ವಸ್ತುಗಳ ದಾಸ್ತಾನು ಕೊಠಡಿ ಬೆಂಕಿಗಾಹುತಿಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ‌ ಈ ಒಂದು ಅಗ್ನಿ ಅನಾಹುತ ನಡೆದಿದ್ದು ಮನೆಯ ಮೇಲ್ಚಾವಣಿ ಸೇರಿದಂತೆ ಸಾವಿರಾರು ಮೌಲ್ಯದ ಗುಜರಿ‌ ವಸ್ತುಗಳು ಸುಟ್ಟುಹೋಗಿದೆ.

ನಾಗೇಶ್ ಭಟ್ ಹಾಗೂ ಅರುಣ್ ಭಟ್ ಸಹೋದರರು ತಮ್ಮ ಮನೆಯ ಪಕ್ಕದಲ್ಲೇ ಒಂದು ಗುಜರಿ‌‌ ಅಂಗಡಿ ನಡೆಸುತ್ತಿದ್ದರು. ಬೆಳಿಗ್ಗೆ ಗುಜರಿ ದಾಸ್ತಾನು ಅಂಗಡಿ ಪಕ್ಕದಲ್ಲಿರುವ ಬಚ್ಚಲು ಕೋಣೆಯಲ್ಲಿ ನೀರು ಕಾಯಿಸುವಾಗ ಬೆಂಕಿ‌ ಕಿಡಿ ಗುಜರಿ ದಾಸ್ತಾನಿಗೆ ತಾಗಿದ್ದು, ಅಗ್ನಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ‌.

ಘಟನೆಯಲ್ಲಿ 50 ಸಾವಿರಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟುಹೋಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ‌ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಆಗಮಿಸಿ ಹೆಚ್ಚಿನ ಅಗ್ನಿ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *