Connect with us

    LATEST NEWS

    ಸಂಘನಿಕೇತನದ 71 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಕ್ಕೆ ಚಾಲನೆ

    ಸಂಘನಿಕೇತನದ 71 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಕ್ಕೆ ಚಾಲನೆ

    ಮಂಗಳೂರು ಸೆಪ್ಟೆಂಬರ್ 13: ಗಣೇಶ ಚತುರ್ಥಿ ಪ್ರಯುಕ್ತ 71 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಘನಿಕೇತನ ಪ್ರತಾಪನಗರ ಇದರ ಶ್ರೀ ಮಹಾ ಗಣಪತಿ ದೇವರ ವಿಗ್ರಹದ ಪ್ರತಿಷ್ಠಾಪನೆ ಹಾಗೂ ಉತ್ಸವದ ಉದ್ಘಾಟನೆ ಗುರುವಾರ ವಿಜೃಂಭಣೆಯಿಂದ ನೆರವೇರಿತು.

    ಉದ್ಘಾಟನೆಯು ಶ್ರೀ ಗೋಕುಲದಾಸ್ ಬಾರ್ಕುರ್ , ಶ್ರೀ ಕಚ್ಚುರು ಮಾಲ್ತಿ ದೇವಿ ದೇವಸ್ಥಾನ ಹಾಗೂ ಶ್ರೀ ಬಬ್ಬು ಸ್ವಾಮಿ ಮೂಲ ಕ್ಷೇತ್ರ ಬಾರ್ಕುರ್ ಉಡುಪಿ ಇದರ ಪ್ರಧಾನ ಕಾರ್ಯದರ್ಶಿಗಳು ದೀಪ ಪ್ರಜ್ವಲನೆಯ ಮುಖಾಂತರ ಉತ್ಸವಕ್ಕೆ ಚಾಲನೆ ನೀಡಿದರು . ಬಳಿಕ ಧ್ವಜಾರೋಹಣ , ವಂದೇಮಾತರಂ , ಗಣಹೋಮ ನೆರವೇರಿತು. ಈ ಗಣೇಶೋತ್ಸವ ಕಾರ್ಯಕ್ರಮವು ಸಂಘನಿಕೇತನದಲ್ಲಿ ೫ ದಿನಗಳ ಕಾಲ ನಡೆಯಲಿದೆ.

    ಮಹಾ ಗಣಪತಿ ದೇವರ ವಿಗ್ರಹದ ಮೆರವಣಿಗೆಯಲ್ಲಿ ಮಣ್ಣಗುಡ್ಡೆಯ ದಿವಂಗತ ಮೋಹನ್ ರಾವ್ ರವರ ಮನೆಯಿಂದ ತರಲಾಯಿತು ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ಡಿ . ವೇದವ್ಯಾಸ್ ಕಾಮತ್ ಶ್ರೀ ದೇವರ ವಿಗ್ರಹಕ್ಕೆ ಭುಜ ಸೇವೆ ಸಲ್ಲಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply