Connect with us

    LATEST NEWS

    ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಪೇಜಾವರ ಶ್ರೀಗಳಿಗೆ ತಿರುಗೇಟು ನೀಡಿದ ಸಾಣೆಹಳ್ಳಿ ಶ್ರೀಗಳು

    ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಪೇಜಾವರ ಶ್ರೀಗಳಿಗೆ ತಿರುಗೇಟು ನೀಡಿದ ಸಾಣೆಹಳ್ಳಿ ಶ್ರೀಗಳು

    ಉಡುಪಿ ಅಗಸ್ಟ್ 2: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿ ಚರ್ಚೆಗೆ ಬರುವಂತೆ ಪೇಜಾವರ ಶ್ರೀಗಳು ನೀಡಿದ ಪಂಥಾಹ್ವಾನಕ್ಕೆ ಸಾಣೆಹಳ್ಳಿ ಶ್ರೀಗಳು ತಿರುಗೇಟು ನೀಡಿದ್ದಾರೆ.

    ಕೆಲದಿನಗಳ ಹಿಂದೆ ಪೇಜಾವರ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಮುಕ್ತ ಚರ್ಚೆಗೆ ಧರ್ಮಗುರುಗಳನ್ನು‌ ಆಹ್ವಾನಿಸಿದ್ದರು. ಪೇಜಾವರ ಶ್ರೀಗಳ ಆಹ್ವಾನಕ್ಕೆ ಪ್ರತಿಕ್ರಿಯೆಯಾಗಿ ಉಡುಪಿಯಲ್ಲಿ ಸಾಣೆಹಳ್ಳಿ ಸ್ವಾಮೀಜಿಗಳು ಈ ಹೇಳಿಕೆ ನೀಡಿದ್ದಾರೆ.

    ಈಗ ಪಂಥಾಹ್ವಾನದ ಅಗತ್ಯವಿಲ್ಲ. ಚರ್ಚೆ ಮಾಡಲೇಬೇಕೆಂಬ ಅಭಿಲಾಷೆ ಪೇಜಾವರ ಶ್ರೀಗಳಿಗೆ ಇದ್ರೆ ಸಾಣೆಹಳ್ಳಿ ಮಠಕ್ಕೆ ಬನ್ನಿ ಎಂದು ತಿರುಗೇಟು ನೀಡಿದ್ದಾರೆ.

    ಇದು ಚರ್ಚೆಯ ಮೂಲಕ ತೀರ್ಮಾನ ಆಗುವ ಸಂಗತಿ ಅಲ್ಲ ಎಂದಿರುವ ಶ್ರೀಗಳು, ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವೇ ಅಲ್ಲ ಎಂದು ವಚನಗಳೇ ಹೇಳಿವೆ. ಹೀಗಾಗಿ ಲಿಂಗಾಯಿತ ಧರ್ಮ ಸ್ವತಂತ್ರ ಧರ್ಮ ಎಂಬುದು ತಮ್ಮ ಸ್ಪಷ್ಟ ಅಭಿಪ್ರಾಯ ಎಂದಿದ್ದಾರೆ.

    ಲಿಂಗಾಯಿತ ಪ್ರತ್ಯೇಕ ಧರ್ಮ ಎಂಬುದು ಹೋರಾಟದ ಮೂಲಕ ಸಾಧಿಸುವ ಕೆಲಸ ಅಲ್ಲ. ಕಾನೂನಾತ್ಮಕವಾಗಿಯೇ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ್ಸಾರೆ .ಮಾತ್ರವಲ್ಲ ,ಇದು ಸಿದ್ದರಾಮಯ್ಯ ಅಥವಾ ಯಡ್ಯೂರಪ್ಪನ ಮೇಲೆ ಭಾರ ಹಾಕಿ ಆಗುವ ಕೆಲಸವೂ ಅಲ್ಲ. ಕಾನೂನು ಹೋರಾಟವೇ ಹೆಚ್ಚು ಸೂಕ್ತ ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply