ತಿರುವನಂತಪುರಂ ನವೆಂಬರ್ 16: ತಿರುವನಂತಪುರಂ ಕಾರ್ಪೊರೇಷನ್ನ ತೃಕ್ಕಣ್ಣಪುರಂ ವಾರ್ಡ್ನಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ತಿರುಮಲದ ಜೈ ನಗರ ಮೂಲದ ಆನಂದ್ ಕೆ ಥಂಪಿ ಎಂದು ಗುರುತಿಸಲಾಗಿದೆ. ಆನಂದ್ ಅವರನ್ನು ವಾರ್ಡ್ಗೆ ಸಂಭಾವ್ಯ ಬಿಜೆಪಿ ಅಭ್ಯರ್ಥಿ ಎಂದು ಹೇಳಲಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆನಂದ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವಾಟ್ಸಾಪ್ ಮೂಲಕ ಮಾಧ್ಯಮಗಳಿಗೆ ಆತ್ಮಹತ್ಯೆ ಪತ್ರ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ತಮ್ಮ ಆತ್ಮಹತ್ಯೆ ಸಂದೇಶದಲ್ಲಿ ಆನಂದ್ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತನಗೆ ಅಭ್ಯರ್ಥಿತ್ವ ನಿರಾಕರಿಸಿದ್ದಕ್ಕೆ ಬಿಜೆಪಿ ನಾಯಕರು ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ ಮತ್ತು ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರು ಇಬ್ಬರೂ “ಭೂ ಮಾಫಿಯಾ” ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ತೃಕ್ಕಣ್ಣಪುರದಲ್ಲಿ ಭೂ ಮಾಫಿಯಾದೊಂದಿಗೆ ಹೊಂದಿಕೊಂಡ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಿದೆ ಎಂದು ಆನಂದ್ ಆರೋಪಿಸಿದ್ದಾರೆ.
Read This – ಒಂದು ವರ್ಷಕ್ಕೆ ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಓ ಆಗಿ ರಾಘವೇಂದ್ರ ಎಸ್ ಭಟ್ ನೇಮಕ
ವಾಟ್ಸಪ್ ಮೆಸೇಜ್ ಗಳಲ್ಲಿ ನನ್ನ ಪಾರ್ಥೀವ ಶರೀರವನ್ನು ಬಿಜೆಪಿ ಅಥವಾ ಆರೆಸ್ಸೆಸ್ ಕಾರ್ಯಕರ್ತರು ನೋಡಬಾರದು, ನನ್ನ ಜೀವನದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದು ದೊಡ್ಡ ತಪ್ಪು ಎಂದು ಬರೆದಿದ್ದಾರೆ.



