LATEST NEWS
ಉಡುಪಿ : ದ್ವಿಚಕ್ರ ವಾಹನ ಸವಾರನಿಗೆ ಮಾರಕಾಸ್ತ್ರ ತೋರಿಸಿ ಹಣ ದರೋಡೆ
ಉಡುಪಿ ಸೆಪ್ಟೆಂಬರ್ 19: ದ್ವಿಚಕ್ರವಾಹನ ಸವಾರನೊಬ್ಬನಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿ ಹಣ ದೋಚಿದ ಪ್ರಕರಣ ಉಡುಪಿಯ ಇಂದ್ರಾಳಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಉದ್ಯೋಗಿಯಾಗಿರುವ ನಿತೇಶ ದೇವಾಡಿಗ ಎಂಬುವರು ಉಡುಪಿ ರೈಲ್ವೆ ನಿಲ್ದಾಣದಿಂದ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ತಡೆದು ಹಲ್ಲೆ ನಡೆಸಿ ನಿತೇಶ ದೇವಾಡಿಗ ಅವರ ಬಳಿ ಇದ್ದ 19 ಸಾವಿರ ರೂ ನಗದು ಹಾಗೂ ಮೊಬೈಲ್ ನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ನಿತೇಶ್ ದೇವಾಡಿಗ ಅವರ ಎದೆಗೆ ಗಾಯವಾಗಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login