Connect with us

    LATEST NEWS

    ರಾಜ್ಯ ಬಂದ್ ಮಾಡಲು ಬಂದರೆ ಕಲ್ಲಲ್ಲಿ ಹೊಡೆದು ಓಡಿಸಿ – ಕಾಳಿ ಶ್ರೀ ರಿಷಿ ಕುಮಾರ ಸ್ವಾಮೀಜಿ

    ಮಂಗಳೂರು :  ರಾಜ್ಯ ಸರಕಾರ ಮರಾಠಾ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆಗೆ ಮುಂದಾದ ಬೆನ್ನಲ್ಲೆ ಡಿಸೆಂಬರ್ 5ರ ಕನ್ನಡ ಸಂಘಟನೆಗಳ ಬಂದ್ ಕರೆ ಕೊಟ್ಟಿದ್ದು, ಕನ್ನಡ ಸಂಘಟನೆಗಳ ರಾಜ್ಯ ಬಂದ್ ವಿರುದ್ದ ಕಾಳಿ ಶ್ರೀ ರಿಷಿ ಕುಮಾರ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ. ಒಂದು ವೇಳೆ ರಾಜ್ಯ ಬಂದ್ ಮಾಡಲು ಬಂದರೆ ಪ್ರತಿಭಟನಾಕಾರರನ್ನು ಕಲ್ಲು ಹೊಡೆದು ಓಡಿಸಿ ಎಂದು ಕರೆ ನೀಡಿದ್ದಾರೆ.


    ಮಂಗಳೂರಿನಲ್ಲಿ ರಾಮ್ ಸೇನಾ ಕರ್ನಾಟಕ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಡಿಸೆಂಬರ್ 5ರ ಕನ್ನಡ ಸಂಘಟನೆಗಳ ಬಂದ್ ವಿಚಾರವಾಗಿ ಕನ್ನಡ ಸಂಘಟನೆ ವಿರುದ್ಧ ಕಾಳಿ ಶ್ರೀರಿಷಿ ಕುಮಾರ ಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯೊಂದಕ್ಕೂ ಬಂದ್, ಬಂದ್ ಎನ್ನುತ್ತೀರಲ್ಲ ?ಕರ್ನಾಟಕವೇನು ನಿಮ್ಮ ಅಪ್ಪನ‌ ಮನೆಯ ಆಸ್ತಿನಾ? ಎಂದು ಕನ್ನಡ ಪರ ಸಂಘಟನೆಗಳನ್ನು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಈ ಸಂಘಟನೆಗಳು ಕನ್ನಡದ ಹೆಸರೇಳಿ ಕಿಡಿಗೇಡಿತನ ನಡೆಸುತ್ತಿದ್ದಾರೆ. ಸಂಘಟನೆ ಹೆಸರೇಳಿ ಪುಡಿ ರೌಡಿಸಂ ಮಾಡುತ್ತಿದ್ದಾರೆ. ಮರಾಠರಿಗೆ ಪ್ರಾಧಿಕಾರ ಕೊಟ್ಟರೆ ನಿಮಗೇನು? ನೀವು 20 ಮಂದಿ ಸೇರಿದ್ರಷ್ಟೇ ಕರ್ನಾಟಕನಾ? ಅಥವಾ 6.5 ಕೋಟಿ ಜನ ನಿಮ್ಮ ಮಾತು ಕೇಳಬೇಕಾ? ಎಂದು ಪ್ರಶ್ನಿಸಿದ ಕಾಳಿ ಸ್ವಾಮೀಜಿ ವರುಷಕ್ಕೆ 20 ರಷ್ಟು ಹಿಂದೂ ಸಂಘಟನೆ ಕಾರ್ಯಕರ್ತರು ಸಾಯುತ್ತಿದ್ದಾರೆ.

    ಕನ್ನಡ ಸಂಘಟನೆಯಲ್ಲಿ ಒಬ್ಬನಾದ್ರೂ ಸತ್ತಿದ್ದೀರಾ?. ಅವನ್ಯಾವನೋ ನರಿ, ಕತ್ತೆ ತಗೊಂಡು ಬಂದು ಕೂಗಾಡ್ತಾನೆ. ಒದ್ದಾಡಿ, ಉರುಳಾಡಿ ಆಮೇಲೆ ಮನೆಗೆ ಹೋಗ್ತಾನೆ. ವಾಟಾಳ್ ನಾಗರಾಜ್ ಹೆಸರೇಳದೆ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡುತ್ತಿದ್ದೇನೆ ಇಂತವರನ್ನ ಯಾಕೆ ರಾಜ್ಯದ ಪ್ರಾಣ ತೆಗೀಲಿಕ್ಕೆ ಇಟ್ಟುಕೊಂಡಿದ್ದೀರ? ಇಂತವರನ್ನ ಸರಕಾರ ಶೂಟ್ ಮಾಡಿ ಬಿಸಾಕಲಿ.ಶಾಸ್ತ್ರ ಮತ್ತು ಶಸ್ತ್ರ ಇವೆರಡೂ ನಮ್ಮ ಸಂಸ್ಕೃತಿ ಎಂದು ಮಂಗಳೂರಿನಲ್ಲಿ ಶ್ರೀರಿಷಿ ಕುಮಾರ ಸ್ವಾಮೀಜಿ ಹರಿ ಹಾಯ್ದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply