ಕುಂದಾಪುರ ಜನವರಿ 28: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಆನೆಗುಡ್ಡೆ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಸಂಪ್ರದಾಯದಂತೆ ರಿಷಬ್ ಶೆಟ್ಟಿ ದಂಪತಿಯು ಶ್ರೀ ವಿನಾಯಕ ದೇವರಿಗೆ ಅತ್ಯಂತ ಪ್ರಿಯವಾದ ‘ಮೂಡು ಗಣಪತಿ’ ಸೇವೆಯನ್ನು ನೆರವೇರಿಸಿದರು.

ಬೆಳಗಿನ ಜಾವವೇ ದೇವಾಲಯಕ್ಕೆ ಆಗಮಿಸಿದ ಅವರು, ಯಾವುದೇ ಆಡಂಬರವಿಲ್ಲದೆ ಸರಳವಾಗಿ ಸಾಮಾನ್ಯ ಭಕ್ತರಂತೆ ದೇವರ ದರ್ಶನ ಪಡೆದರು. ಪೂಜಾ ವಿಧಿವಿಧಾನಗಳ ನಂತರ ದೇವಾಲಯದ ಅರ್ಚಕರು ನಟನಿಗೆ ಪ್ರಸಾದ ನೀಡಿ ಶುಭ ಹಾರೈಸಿದರು. ಕಾಂತಾರ ಸಿನೆಮಾದ ಮುಹೂರ್ತವನ್ನು ರಿಷಬ್ ಶೆಟ್ಟಿ ಆನುಗಡ್ಡೆ ದೇವಸ್ಥಾನದಲ್ಲೇ ನೆರವೇರಿಸಿದ್ದರು, ಕಾಂತಾರಾ ಸಿನೆಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದು, ರಿಷಬ್ ಶೆಟ್ಟಿ ಖ್ಯಾತಿಯನ್ನು ತಂದುಕೊಟ್ಟಿದೆ.
ದರ್ಶನದ ಬಳಿಕ ದೇವಾಲಯದ ಪರಿಸರದಲ್ಲಿ ಕೆಲಕಾಲ ಕಳೆದ ದಂಪತಿ, ಅಲ್ಲಿನ ಶಾಂತಿಯುತ ವಾತಾವರಣವನ್ನು ಆಸ್ವಾದಿಸಿ ನಂತರ ತೆರಳಿದರು.