LATEST NEWS
ಮಗನ ಪಾರ್ಟಿ ಹುಚ್ಚು – ತಾಯಿ ಕೆಲಸಕ್ಕೆ ಬಂತು ಕುತ್ತು…!!
ಮಂಗಳೂರು ಎಪ್ರಿಲ್ 17: ಮಗನ ಪಾರ್ಟಿ ಹುಚ್ಚಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಈಗ ಕೆಲಸ ಕಳೆದು ಸ್ಥಿತಿಗೆ ಬಂದಿದ್ದಾರೆ.
ಎಪ್ರಿಲ್ 10 ರಂದು ಹಾಸನದ ಆಲೂರು ತಾಲೂಕು ಕೆಂಚಮ್ಮನ ಹೊಸಕೋಟೆ ಸಮೀಪದ ನಂದಿಪುರ ಎಸ್ಟೇಟ್ ಮೋಟಾರ್ ಸೈಕಲ್ ರೆಸಾರ್ಟ್ನಲ್ಲಿ ಆಯೋಜಿಸಿದ್ದ ರೇವ್ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಮಂಗಳೂರು ನಗರ ಸೆನ್ (ಸೈಬರ್, ಇಕಾನಾಮಿಕ್ ಆ್ಯಂಡ್ ನಾರ್ಕೊಟಿಕ್) ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಶ್ರೀಲತಾ ಅವರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.
ಈ ಪಾರ್ಟಿಯನ್ನು ಶ್ರೀಲತಾ ಅವರ ಪುತ್ರ ಅತುಲ್ ಆಯೋಜಿಸಿದ್ದು, ಇದರಲ್ಲಿ ಶ್ರೀಲತಾ ಭಾಗಿಯಾಗಿದ್ದ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಹಾಸನ ಎಸ್ಪಿ ಅವರಿಗೆ ಶಶಿಕುಮಾರ್ ಪತ್ರ ಬರೆದಿದ್ದರು. ಶ್ರೀಲತಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು ಎಸ್ಪಿ ನೀಡಿದ ವರದಿ ಪ್ರಕಾರ ದೃಢಪಟ್ಟಿದ್ದರಿಂದ ಆಕೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಹೀಗಾಗಿ ಅವರ ಕೆಲಸಕ್ಕೆ ಪುತ್ರನಿಂದಲೇ ಕುತ್ತು ಬಂದಂತಾಗಿದೆ.
You must be logged in to post a comment Login