LATEST NEWS
ಫೆಬ್ರವರಿ 14ನ್ನು ಪುಲ್ವಾಮಾ ಹುತಾತ್ಮರ ದಿನವಾಗಿ ಆಚರಿಸಿಲು ಬಜರಂಗದಳ ಕರೆ
ಫೆಬ್ರವರಿ 14ನ್ನು ಪುಲ್ವಾಮಾ ಹುತಾತ್ಮರ ದಿನವಾಗಿ ಆಚರಿಸಿಲು ಬಜರಂಗದಳ ಕರೆ
ಮಂಗಳೂರು ಫೆಬ್ರವರಿ 11: ಕಳೆದ ವರ್ಷ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದ ಸಿಆರ್ ಪಿಎಫ್ ಯೋಧರ ನೆನಪಿಗಾಗಿ ಫೆಬ್ರವರಿ 14 ನ್ನು ಪುಲ್ವಾಮಾ ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ಬಜರಂಗದಳ ಕರೆ ನೀಡಿದೆ.
ಈ ಬಗ್ಗೆ ಮಂಗಳೂರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್, 2019ರ ಫೆಬ್ರವರಿ 14 ದೇಶವೇ ಮರೆಯಲಾಗದ ದಿನವಾಗಿದ್ದು, ಈ ದಿನ ನಾವು ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರನ್ನು ಸ್ಮರಿಸುವಂತಹ ದಿನ. ಅದಕ್ಕಾಗಿ ಫೆ. 14ರಂದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ‘ಪುಲ್ವಾಮಾ ಹುತಾತ್ಮ ದಿವಸ್’ ನ್ನು ಆಚರಿಸಲು ಭಜರಂಗದಳ ಕಾರ್ಯಕರ್ತರು ಮುಂದಾಗಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲಾ ರಾಷ್ಟ್ರ ಪ್ರೇಮಿಗಳು ಭಾಗವಹಿಸಿ ಸೈನಿಕರಿಗೆ ಶ್ರದ್ದಾಂಜಲಿ ಅರ್ಪಿಸಬೇಕು ಎಂದರು. ಮಾತ್ರವಲ್ಲದೆ ಪ್ರತೀ ವರ್ಷ ಫೆ.14ರಂದು ಪುಲ್ವಾಮಾ ಹುತಾತ್ಮ ದಿನ ಆಚರಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಗೃಹ ಸಚಿವರ ಮೂಲಕ ಮನವಿ ಮಾಡಲಿದ್ದೇವೆ ಎಂದು ಹೇಳಿದರು.
You must be logged in to post a comment Login