ಕೇರಳ ನವೆಂಬರ್ 22: ಮದುವೆಗೆ ಇನ್ನೇನು ಕೆಲವೆ ಗಂಟೆಗಳಿರುವ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ವಧುವಿಗೆ ಆಸ್ಪತ್ರೆಯಲ್ಲೇ ವರ ತಾಳಿಕಟ್ಟಿದ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ.

ಮದುವೆ ದಿನ ಬೆಳಗಿನ ಜಾವ ಮೇಕಪ್ ಮಾಡಿಕೊಳ್ಳಲು ವಧು ಅವನಿ ತನ್ನ ಕುಟುಂಬದ ಜೊತೆ ಆಲಪ್ಪುಳದ ಕುಮಾರಕೋಮ್ ಗೆ ಕಾರಿನಲ್ಲಿ ತೆರಳಿದ್ದರು. ಈ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಈ ಭೀಕರ ರಸ್ತೆ ಅಪಘಾತದಲ್ಲಿ ವಧು ಅವನಿ ಅವರ ಬೆನ್ನು ಮೂಳೆಗೆ ಗಂಭೀರಗಾಯಗಳಾಗಿತ್ತು.
ಸ್ಥಳೀಯ ನಿವಾಸಿಗಳು ಗಾಯಗೊಂಡವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು, ಆದರೆ ಗಾಯದ ತೀವ್ರತೆಯಿಂದಾಗಿ ವಿಶೇಷ ಚಿಕಿತ್ಸೆಗಾಗಿ ಕೊಚ್ಚಿಯ ವಿಪಿಎಸ್ ಲೇಕ್ಶೋರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮದುವೆಯನ್ನು ಮೊದಲು ಶುಕ್ರವಾರ ಮಧ್ಯಾಹ್ನ ಅಲಪ್ಪುಳದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ವರ ಶರೋನ್ ಮತ್ತು ಅವರ ಕುಟುಂಬ ಆಸ್ಪತ್ರೆಗೆ ತಲುಪಿದಾಗ ಅವನಿಯ ಸ್ಥಿತಿಯ ಬಗ್ಗೆ ತಿಳಿದ ನಂತರ, ಎರಡೂ ಕುಟುಂಬಗಳು ಮದುವೆಯ ಶುಭ ಗಳಿಗೆಯಲ್ಲೇ ನಡೆಸಬೇಕೆಂದು ತೀರ್ಮಾನಿಸಿದರು.
ಬಳಿಕ ನರಶಸ್ತ್ರಚಿಕಿತ್ಸಾ ತಂಡದೊಂದಿಗೆ ಸಮಾಲೋಚಿಸಿದ ನಂತರ, ಆಸ್ಪತ್ರೆಯ ಅಧಿಕಾರಿಗಳು ತುರ್ತು ವಿಭಾಗದ ಒಳಗೆ ಸಮಾರಂಭವನ್ನು ನಡೆಸಲು ವ್ಯವಸ್ಥೆ ಮಾಡಿದರು. ಮಧ್ಯಾಹ್ನ 12.15 ರಿಂದ 12.30 ರ ನಡುವೆ, ವೈದ್ಯರು, ದಾದಿಯರು ಮತ್ತು ನಿಕಟ ಸಂಬಂಧಿಗಳ ಸಮ್ಮುಖದಲ್ಲಿ, ಅವನಿ ಸ್ಟ್ರೆಚರ್ ಮೇಲೆ ಮಲಗಿದ್ದಾಗ ಶರೋನ್ ತಾಳಿ ಕಟ್ಟಿದ್ದರು.
ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುದೀಶ್ ಕರುಣಾಕರನ್, ಅವನಿ ಅವರ ಬೆನ್ನುಮೂಳೆಗೆ ಗಂಭೀರ ಗಾಯವಾಗಿದ್ದು, ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಿದರು. ವರ ಶರೋನ್ ಆಲಪ್ಪುಳದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.



