Connect with us

    LATEST NEWS

    ಕಾರಿನಲ್ಲಿ ಅತ್ಯಾಚಾರ ಮಾಡಿ ಬಳಿಕ ಕೊಲೆ ಬೆದರಿಕೆ -ಮಹಿಳೆಯಿಂದ ದೂರು

    ಮಂಗಳೂರು ಜುಲೈ 28: ಗಂಡನಿಂದ ದೂರವಾಗಿರುವ ಮಹಿಳೆಯೊಬ್ಬರನ್ನು ನಂಬಿಸಿ ಕಾರಿನಲ್ಲಿ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.


    ಮಂಗಳೂರಿನ ಮಹಿಳೆಯೊಬ್ಬರು ಮೂಡಬಿದಿರೆಯ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದು ಸಂಸಾರಿಕ ಜೀವನದಲ್ಲಿ ಬಿರುಕು ಉಂಟಾಗಿ ದೂರವಾಗಿದ್ದರು. ಇವರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

    ಇವರ ತಂದೆ – ತಾಯಿಯ ಮನೆ ಚಿಕ್ಕದಾಗಿರುವುದರಿಂದ ಎರಡು ತಿಂಗಳ ಹಿಂದೆ ಬೆಂಗರೆ ಕೂಳೂರು ಬಳಿ ಪ್ರಶಾಂತ್ ಅಪ್ಪು ಎಂಬವರ ಮನೆ ಬಾಡಿಗೆ ಪಡೆದಿದ್ದರು. ಅಲ್ಲಿ ಬಟ್ಟೆಬರೆ ಇಟ್ಟು ಬಂದ ಬಳಿಕ ಜ್ವರ ಬಂದಿದ್ದರಿಂದ ಬಾಡಿಗೆ ಮನೆಗೆ ಹೋಗದೆ ತಂದೆ ಮನೆಯಲ್ಲಿಯೆ ಇದ್ದರು.ಈ ನಡುವೆ ಇವರಿಂದ ಬಾಡಿಗೆ ಪಡೆದುಕೊಂಡ ಮನೆ ಮಾಲೀಕ ಪ್ರಶಾಂತ್ ಅಪ್ಪು ಈ ಮಹಿಳೆಯ ಬಟ್ಟೆಗಳನ್ನು ಕೊಂಡುಹೋಗಲು ಒತ್ತಾಯ ಮಾಡಿದ್ದಾನೆ.


    ಜುಲೈ 8 ರಂದು ಆತ ಕರೆ ಮಾಡಿ ಜುಲೈ 9 ಕ್ಕೆ ಬಟ್ಟೆಗಳನ್ನು ಕುಂಟಿಕಾನದ ಪ್ಲೈ ಓವರ್ ನ ಬಳಿ ತರುತ್ತೇನೆ ಎಂದು ತಿಳಿಸಿದ್ದನಂತೆ.ಅದರಂತೆ ಮಹಿಳೆ ಅಲ್ಲಿಗೆ ಹೋದ ಸಂದರ್ಭದಲ್ಲಿ ಬಟ್ಟೆ ತರಲು ಮರೆತು ಹೋಯಿತು. ಕಾರಿನಲ್ಲಿ ಹೋಗಿ ತರೋಣ ಎಂದು ಹೇಳಿ ಕಾರಿನಲ್ಲಿ ಕೂರಿಸಿದ್ದಾನೆ. ಬಳಿಕ ಜನ ಸಂಚಾರ ಇಲ್ಲದ ಜಾಗದಲ್ಲಿ ಕಾರು ನಿಲ್ಲಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಅದೇ ಕಾರಿನಲ್ಲಿ ಮುಖ್ಯ ರಸ್ತೆ ಬಂದ ಬಳಿಕ ತಪ್ಪಿಸಿಕೊಂಡು ಹೋಗಿದ್ದಾನೆ. ಇದಾದ ಬಳಿಕ ಆರೋಪಿ, ಮಹಿಳೆಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾನಂತೆ. ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನಂತೆ. ಈ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply