LATEST NEWS
ಕರುಣೆ ಇಲ್ಲದ ಕೇಂದ್ರ ಸರಕಾರದಿಂದ ಹಗಲು ದರೋಡೆ – ರಮಾನಾಥ ರೈ
ಮಂಗಳೂರು ಫೆಬ್ರವರಿ 19: ನಿರಂತರವಾಗಿ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟದಲ್ಲಿದ್ದು, ಜನಸಾಮಾನ್ಯರ ಮೇಲೆ ಕರುಣೆಯಿಲ್ಲದ ಕೇಂದ್ರ ಸರಕಾರ ಹಗಲು ದರೋಡೆಯಲ್ಲಿ ತೊಡಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು ಕೇಂದ್ರ ಸರಕಾರ ದರ ಏರಿಕೆಗೆ ಕೊರೊನಾ ಕಾರಣ ನೀಡುತ್ತಿದ್ದು, ಬೇರೆ ದೇಶಗಳಲ್ಲಿ ಕೊರೊನಾ ಬಂದಿಲ್ವಾ? ದೇಶದ ಇತಿಹಾಸದಲ್ಲೇ ಈ ರೀತಿಯ ಸರಕಾರ ಅಧಿಕಾರಕ್ಕೆ ಬಂದಿಲ್ಲ ಎಂದು ರೈ ಆಕ್ರೋಶ ವ್ಯಕ್ತಪಡಿಸಿದರು.
ತುಳು ಚಿತ್ರನಟರೊಬ್ಬರು ಪೆಟ್ರೋಲ್ ದರ ಏರಿಕೆ ಪ್ರಶ್ನಿಸಿದ್ದಕ್ಕೆ ಗದರಿಸಿ ಬಾಯಿ ಮುಚ್ಚಿಸಲಾಗಿದೆ. ಜನರಿಗೆ ಧೈರ್ಯವಾಗಿ ಟೀಕೆ ಮಾಡಲೂ ಅವಕಾಶ ಇಲ್ಲದಂತಹ ಆಡಳಿತ ಈ ದೇಶದಲ್ಲಿದೆ. ಪ್ರತಿಭಟನೆ ಮಾಡಿದರೆ ಅವರಿಗೆ ದೇಶದ್ರೋಹದ ಹಣೆಪಟ್ಟಿ ಕಟ್ಟುತ್ತಾರೆ ಎಂದರು.
ಇಂಧನ ದರ ಏರಿಕೆ ಪರಿಣಾಮ ಬಡವರು ಊಟಕ್ಕೂ ಕಷ್ಟಪಡುತ್ತಿದ್ದಾರೆ. ನಿರುದ್ಯೋಗ ಹೆಚ್ಚಿದೆ. ಸ್ವಾತಂತ್ರ್ಯಾನಂತರ ಪ್ರಗತಿಪರ ಕಾರ್ಯಕ್ರಮಗಳು ಆರಂಭವಾಗುವ ಮೊದಲಿನ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಲಾಗಿದೆ. ಇದರ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಶೀಘ್ರದಲ್ಲೇ ಆಯೋಜಿಸಲಾಗುವುದು ಎಂದರು.
You must be logged in to post a comment Login