Connect with us

LATEST NEWS

ಬಿಜೆಪಿಯವರಿಂದ ಹತ್ಯೆಗೀಡಾದವರ ಸಂಖ್ಯೆ ಹೆಚ್ಚಿದೆ – ರಮಾನಾಥ ರೈ

ಮಂಗಳೂರು,ಸೆಪ್ಟೆಂಬರ್ 05 : ಬಿಜೆಪಿ ಆಯೋಜಿಸಿರುವ ಮಂಗಳೂರು ಚಲೋ  ಬೈಕ್ ಜಾಥಾ ದಲ್ಲಿ  ಏನಾದರೂ ಅನಾಹುತಗಳು , ಅಹಿತಕರ ಘಟನೆಗಳು ಸಂಭವಿಸಿದರೆ ಯಾರು ಹೊಣೆ ಅದ್ದರಿಂದ ಈ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗುತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ ಜಾಥಾಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರಕಾರದ ಕ್ರಮವನ್ನು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಮರ್ಥಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿಭಟನಾ ಬೈಕ್ ಜಾಥಾ ದಕ್ಷಿಣಕನ್ನಡ ಜಿಲ್ಲೆ ಪ್ರವೇಶಿಸಿದರೆ, ಶಾಂತಿ ಕದಡುವ ಆತಂಕವಿದೆ. ಅದಲ್ಲದೇ ಇತರ ಜಿಲ್ಲೆಗಳಿಂದ ಬೈಕ್ ಗಳು ಬಂದಾಗ ರಸ್ತೆ ಸುಗಮ ಸಂಚಾರಕ್ಕೆ ತೊಂದರೆ ಆಗಲಿರುವ ಹಿನ್ನಲೆಯಲ್ಲಿ ಬೈಕ್ ಜಾಥಾವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿಭಟನಾ ಪಾದಯಾತ್ರೆ ಮಾಡಿದರೆ ತೊಂದರೆ ಇಲ್ಲ ಎಂದು ಹೇಳಿದ ಅವರು ಪಾದಯಾತ್ರೆಗೆ ಮುಖ್ಯಮಂತ್ರಿ ಅವರೂ ಹೇಳಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಮಾತ್ರ ಸತ್ತಿಲ್ಲ ಇತರರು ಸತ್ತಿದ್ದಾರೆ. ಬಿಜೆಪಿಯಿಂದ ಹತ್ಯೆಗೀಡಾದವರ ಸಂಖ್ಯೆ ಹೆಚ್ಚಿದೆ ಎಂದು ಅವರು ಕಿಡಿಕಾರಿದರು.

ಹತ್ಯೆಗಳಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ಹೊರತು ಪಡಿಸಿ ಸೆಪ್ಟೆಂಬರ್ 12 ರಂದು ಸಾಮರಸ್ಯ ನಡಿಗೆ ಮಾಡುವುದಾಗಿ ಹೇಳಿದ ಅವರು ಸಾಮರಸ್ಯ ನಡಿಗೆಯಲ್ಲಿ ಇತರೇ ಜಿಲ್ಲೆಯವರನ್ನು ಕರೆಸುತ್ತಿಲ್ಲ, ಇದೇ ಜಿಲ್ಲೆಯ ಜನರೇ ಭಾಗವಹಿಸುತ್ತಾರೆ . ಜನರ ಬೇಡಿಕೆಗೆ ಅನುಗುಣವಾಗಿ ಸಾಮರಸ್ಯ ನಡಿಗೆ ಆಯೋಜಿಸಿರುವುದಾಗಿ ರೈ ತಿಳಿಸಿದರು.

Video

Advertisement
Click to comment

You must be logged in to post a comment Login

Leave a Reply