LATEST NEWS
ಶ್ರುತಿ ಹರಿಹರನ್ ಒಳ್ಳೆ ಹುಡುಗಿ ಸುಮ್ಮನೆ ಹೇಳಲ್ಲ- ರಾಗಿಣಿ ದ್ವಿವೇದಿ
ಶ್ರುತಿ ಹರಿಹರನ್ ಒಳ್ಳೆ ಹುಡುಗಿ ಸುಮ್ಮನೆ ಹೇಳಲ್ಲ- ರಾಗಿಣಿ ದ್ವಿವೇದಿ
ಮಂಗಳೂರು ಅಕ್ಟೋಬರ್ 22: #MeToo ಅಭಿಯಾನ ಸಮಸ್ಯೆ ಹೇಳಿಕೊಳ್ಳುವವರಿಗೆ ಒಂದು ಒಳ್ಳೆಯ ವೇದಿಕೆ ಆಗಿದೆ. ಆದರೆ, ಕೆಲವರು ಈ ಅಭಿಯಾನದ ದುರ್ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಬಹು ಭಾಷಾ ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.
ನಗರದಲ್ಲಿ ರಾಗಿಣಿ ತಮ್ಮ ಹೊಸ ಮೂವಿ ‘ದಿ ಟೆರರಿಸ್ಟ್’ ಯಶಸ್ಸಿಗಾಗಿ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಬಹುಭಾಷಾ ನಟ ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿರುವ ಶ್ರುತಿ ಹರಿಹರನ್ ಒಬ್ಬ ಒಳ್ಳೆಯ ಹುಡುಗಿ. ಅನಗತ್ಯವಾಗಿ ಅವಳೇನೂ ಹೇಳಿಕೊಳ್ಳಲ್ಲ.
ನಿಜವಾಗಿ ಅವಳು ಹೇಳುವ ಹಾಗೆ ಘಟನೆ ನಡೆದಿದ್ದರೆ ತಪ್ಪೆಸಗಿದವರಿಗೆ ಶಿಕ್ಷೆಯಾಗಬೇಕು. ಹಾಗಂತ, ಯಾರೂ ಕೂಡಾ #MeToo ಹೆಸರನ್ನು ಸ್ವಾರ್ಥಕ್ಕೆ ಬಳಸುವುದು ಸರಿಯಲ್ಲ ಎಂದು ನಟಿ ರಾಗಿಣಿ ದ್ವಿವೇದಿ ಅಭಿಪ್ರಾಯಪಟ್ಟರು.
You must be logged in to post a comment Login