LATEST NEWS
ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಪುತ್ತೂರು, ಸೆಪ್ಟಂಬರ್ 6: ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆಯ ಪುತ್ತೂರು ವರದಿಗಾರರಾದ ಸುಧಾಕರ್ ಸುವರ್ಣ ತಿಂಗಳಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆಯ ಪುತ್ತೂರು ವರದಿಗಾರರಾದ ಗಣೇಶ್ ಕಲ್ಲರ್ಪೆ, ಉಪಾಧ್ಯಕ್ಷರಾಗಿ ಸುದ್ಧಿ ಬಿಡುಗಡೆ ಪತ್ರಿಕೆಯ ಉಮಾಪ್ರಸಾದ್ ರೈ ನಡುಬೈಲು, ಕರಾವಳಿ ಅಲೆ ಪತ್ರಿಕೆಯ ಉಪ್ಪಿನಂಗಡಿ ವಲಯ ವರದಿಗಾರರಾದ ಸರ್ವೇಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿಯಾಗಿ ಮುಕ್ತ ಟಿವಿ ವರದಿಗಾರರಾದ ಅನೀಶ್ ಕುಮಾರ್ , ಕೋಶಾಧಿಕಾರಿಯಾಗಿ ದೈಜಿ ವಲ್ಡ್ ಚಾನಲ್ ನ ಕೃಷ್ಣ ಪ್ರಸಾದ್ ಬಲ್ನಾಡು ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಎಲ್ಲಾ ಆಯ್ಕೆಯೂ ಅವಿರೋಧವಾಗಿ ನಡೆದಿದೆ.
You must be logged in to post a comment Login