DAKSHINA KANNADA
ಪುತ್ತೂರು ಪತ್ರಕರ್ತರ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಪುತ್ತೂರು ಪತ್ರಕರ್ತರ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಪುತ್ತೂರು ಅಗಸ್ಟ್ 15: ಎಪ್ಪತ್ತ ಮೂರನೇ ಸ್ವಾತಂತ್ರ್ಯೋತ್ಸವವನ್ನು ಪುತ್ತೂರು ಪರ್ತಕರ್ತರ ಸಂಘದ ವತಿಯಿಂದ ಆಚರಿಸಲಾಯಿತು. ಪುತ್ತೂರು ನಗರ ಸಭೆಯ ಸಫಾಯಿ ಕರ್ಮಚಾರಿ ಗುಲಾಬಿ ಯವರು ಧ್ವಜಾರೋಹಣವನ್ನು ನೆರವೇರಿಸಿದರು.
ಪುತ್ತೂರು ಪತ್ರಕರ್ತರ ಸಂಘ ಪ್ರತಿ ವರ್ಷವೂ ಸಮಾಜದಲ್ಲಿ ಅತ್ಯಂತ ತಳಮಟ್ಟದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳ ಮೂಲಕವೇ ಧ್ವಜಾರೋಹಣ ವನ್ನು ನೆರವೇರಿಸುತ್ತಿದ್ದು, ಈ ಹಿಂದೆ ಅಂಬ್ಯುಲೆನ್ಸ್ ಚಾಲಕ, ಪೊಸ್ಟ್ ಮ್ಯಾನ್, ರೈಲ್ವೇ ಗ್ಯಾಂಗ್ ಮೆನ್, ನೀರು ಬಿಡುವ ಪೌರ ಕಾರ್ಮಿಕರು ಸೇರಿದಂತೆ ಹಲವರು ಪುತ್ತೂರು ಪತ್ರಕರ್ತರ ಸಂಘದಲ್ಲಿ ಆಚರಿಸಲ್ಪಡುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.
You must be logged in to post a comment Login