Connect with us

    DAKSHINA KANNADA

    ಪುತ್ತೂರು ಅಬಕಾರಿ ಪೊಲೀಸರ ಕಾರ್ಯಾಚರಣೆ – ಕಳ್ಳಭಟ್ಟಿ ಸಾರಾಯಿ ಪತ್ತೆ – ಆರೋಪಿ ಆರೆಸ್ಟ್

    ಪುತ್ತೂರು ಎಪ್ರಿಲ್ 23 : ಸವಣೂರು ಗ್ರಾಮದ ಪುಣ್ಚಪ್ಪಾಡಿಯಲ್ಲಿ ಬೆಳ್ಳಂಬೆಳಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಪೊಲೀಸರು 900 ಲೀಟರ್ ಗೇರು ಹಣ್ಣಿನ ಹುಳಿ ರಸ ಮತ್ತು 1 ಲೀಟರ್ ಗೇರು ಹಣ್ಣಿನ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.


    ಬಂಧಿತ ಆರೋಪಿಯನ್ನು ಸವಣೂರು ಗ್ರಾಮದ ಪುಣ್ಚಪ್ಪಾಡಿ ನಿವಾಸಿ ಧರ್ಮಪ್ರಕಾಶ್ ರೈ ಎಂದು ಗುರುತಿಸಲಾಗಿದೆ.


    ಆರೋಪಿ ಧರ್ಮಪ್ರಕಾಶ್ ಅವರು ಪುಣ್ಚಪ್ಪಾಡಿ ಮನೆಗೆ ಇಳಿಸಿದ ಶೆಡ್ ನಲ್ಲಿ ಕಳ್ಳಭಟ್ಟಿ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply