Connect with us

    BELTHANGADI

    ಪ್ರತಿಭಟನೆಯಲ್ಲಿ ಹಿಂದೂ ಭಗವಾಧ್ವಜಕ್ಕೆ ಬೆಂಕಿ ಭುಗಿಲೆದ್ದ ಆಕ್ರೋಶ

    ಪ್ರತಿಭಟನೆಯಲ್ಲಿ ಹಿಂದೂ ಭಗವಾಧ್ವಜಕ್ಕೆ ಬೆಂಕಿ ಭುಗಿಲೆದ್ದ ಆಕ್ರೋಶ

    ಮಂಗಳೂರು ಅಗಸ್ಟ್ 29: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯಲ್ಲಿ ಇತ್ತೀಚಿಗೆ ನಡೆದ ಪ್ರತಿಭಟನೆಯೊಂದರಲ್ಲಿ ಹಿಂದೂ ಭಗವಾಧ್ವಜವನ್ನು ಹೊತ್ತಿಸಲಾಗಿದ್ದು, ಈ ವಿಚಾರವಾಗಿ ಇದೀಗ ಜಿಲ್ಲೆಯಲ್ಲಿ ಭಾರೀ ಚರ್ಚೆ ಆರಂಭಗೊಂಡಿದೆ.

    ದಲಿತ ಸಂಘಟನೆಗಳು ಬೆಳ್ತಂಗಡಿಯ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಈ ಪ್ರತಿಭಟನೆಯನ್ನು ನಡೆಸಿದ್ದು, ಇದರಲ್ಲಿ ಆರ್.ಎಸ್.ಎಸ್ ವಿರುದ್ಧ ಘೋಷಣೆ ಕೂಗುವ ಜೊತೆಗೆ ಹಿಂದೂ ಭಗವಾಧ್ವಜಕ್ಕೂ ಬೆಂಕಿ ಹಚ್ಚಲಾಗಿದೆ.

    ಈ ವಿಚಾರವಾಗಿ ಇದೀಗ ಜಿಲ್ಲೆಯಾದ್ಯಂತ ಭಾರೀ ಚರ್ಚೆ ಆರಂಭಗೊಂಡಿದೆ. ಹಿಂದೂ ಸಂಘಟನೆಗಳ ಭದ್ರಕೋಟೆಯಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ.

    ಈ ಸಂಬಂಧ. ಸಾಮಾಜಿಕ ಜಾಲತಾಣಗಳಲ್ಲಿಯೂ ಪರ-ವಿರೋಧ ಚರ್ಚೆಗಳು ಆರಂಭಗೊಂಡಿದ್ದು, ಪ್ರಕರಣ ಪೋಲೀಸ್ ಠಾಣೆಯ ಮೆಟ್ಟಿಲನ್ನೂ ಏರುವ ಸಾಧ್ಯತೆಯಿದೆ.

    Share Information
    Advertisement
    Click to comment

    You must be logged in to post a comment Login

    Leave a Reply