LATEST NEWS
ಹಿಂದೂ ಮುಖಂಡನ ಮೀನು ಮಾರಾಟ ಅಂಗಡಿಗೆ ಬೆಂಕಿ -ಆರೋಪಿಗಳ ಬಂಧನಕ್ಕೆ ಗುರುವಾರ ಗಡುವು ನೀಡಿದ ಮುಖಂಡರು
ಪುತ್ತೂರು ಅಗಸ್ಟ್ 24: ಉಪ್ಪಿನಂಗಡಿಯ ಹಳೆಗೇಟುವಿನ ರಾಷ್ಟ್ರೀಯ ಹೆದ್ದಾರಿ ಬಳಿ ಹಿಂದೂ ಸಂಘಟನೆ ಮುಖಂಡ ಅಶೋಕ್ ಎಂಬುವವರಿಗೆ ಸೇರಿದ ಮೀನಿನ ಅಂಗಡಿಗೆ ಬೆಂಕಿ ಇಟ್ಟ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಉಪ್ಪಿನಂಗಡಿ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಕಳೆದ ಭಾನುವಾರ ಅಶೋಕ್ ಅವರಿಗೆ ಸೇರಿದ್ದ ಮೀನು ಮಾರಾಟ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು.ಈ ಘಟನೆ ವಿರೋಧಿಸಿ ಹಿಂದೂ ಪರ ಸಂಘಟನೆಗಳು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಉಪ್ಪಿನಂಗಡಿ ಬಳಿ ಹೆದ್ದಾರಿ ತಡೆದ ಪ್ರತಿಭಟನೆ ನಡೆಸಿದರು. ಗುರುವಾರದ ಒಳಗೆ ಕಿಡಿಗೇಡಿಗಳ ಬಂಧಿಸದಿದ್ದರೆ ಶುಕ್ರವಾರದಂದು ಉಪ್ಪಿನಂಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದು, ನಂತರ ಬಳಿಕದ ಅಹಿತಕರ ಘಟನೆಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಸಂಘಟನೆಗಳ ನಾಯಕರು ಎಚ್ಚರಿಕೆ ನೀಡಿದ್ದಾರೆ.
You must be logged in to post a comment Login