Connect with us

    DAKSHINA KANNADA

    ಹಿಂದೂಗಳ ಭಾವನೆ ನೋಯಿಸುವ ಕೆ.ಎಸ್.ಭಗವಾನ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

    ಪುತ್ತೂರು ಜನವರಿ 23: ಪದೇ ಪದೇ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಕೆ.ಎಸ್‌ ಭಗವಾನ್‌ನನ್ನು ಬಂಧಿಸಿ ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಜನವರಿ 23 ರಂದು ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.


    ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿ ಮುಖಂಡ ಆನಂದ ಗೌಡ ಮೈಸೂರಿನ ವಿವಾದಿತ ಪ್ರಾಧ್ಯಾಪಕ ಕೆ ಎಸ್ ಭಗವಾನ್‌ ಕೊಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ್ದಾನೆ. ಕೆ ಎಸ್ ಭಗವಾನ್ ಮಂಡ್ಯದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಭು ಶ್ರೀರಾಮನು ಮದ್ಯಾಹ್ನ ತನ್ನ ಪತ್ನಿ ಸೀತೆಯ ಜೊತೆ ಸೇರಿ ಮದ್ಯಪಾನವನ್ನು ಮಾಡುತ್ತಿದ್ದನು. ಶ್ರೀರಾಮ ಆದರ್ಶ ಅಲ್ಲವೇ ಅಲ್ಲ. ಶ್ರೀರಾಮ 11 ಸಾವಿರ ಅಲ್ಲ, ಕೇವಲ 11 ವರ್ಷ ಆಡಳಿತವನ್ನು ಮಾಡಿದ್ದನು.

    ಹೀಗೆ ಅತ್ಯಂತ ಕೆಟ್ಟದಾಗಿ ಕೊಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾನೆ. ಈ ಹಿಂದೆ ಇದೇ ರೀತಿಯಲ್ಲಿ ಪ್ರಭು ಶ್ರೀರಾಮಚಂದ್ರನ ಬಗ್ಗೆ ಅಪಮಾನ ಮಾಡಿದ ಸಂದರ್ಭದಲ್ಲಿ ಆತನ ಮೇಲೆ ಪ್ರಕರಣ ದಾಖಲಾಗಿತ್ತು. ತದನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದ್ದು,ಸರಕಾರ ಕೂಡಲೇ ಆತನ ಬಂಧನಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

     

    Share Information
    Advertisement
    Click to comment

    You must be logged in to post a comment Login

    Leave a Reply