Connect with us

    LATEST NEWS

    ಸೂಲಿಬೆಲೆ ನಿಂದನೆ ಪ್ರಕರಣ : ರೈ ವಿರುದ್ದ ಕೋರ್ಟಿನಲ್ಲಿ ದೂರು ದಾಖಲು

    ಸೂಲಿಬೆಲೆ ನಿಂದನೆ ಪ್ರಕರಣ : ರೈ ವಿರುದ್ದ ಕೋರ್ಟಿನಲ್ಲಿ ದೂರು ದಾಖಲು
    ಮಂಗಳೂರು,ಸೆಪ್ಟೆಂಬರ್ 26 : ಚಿಂತಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆಗೆ ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವಮಾನ ಪ್ರಕರಣಕ್ಕೆರ ಸಂಬಂಧಿದಂತೆ ಮಂಗಳೂರು ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
    ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚೀಲ್ ಅವರು ಈ ದೂರನ್ನು ದಾಖಲಿಸಿದ್ದಾರೆ. ಸೆಪ್ಟೆಂಬರ್‌ 22 ರಂದು ಉಳ್ಳಾಲದ ಅಸೈಗೋಲಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆಯನ್ನು ಸಚಿವ ಬಿ. ರಮಾನಾಥ ರೈ ಅವರು ಸಾರ್ವಜನಿಕವಾಗಿ ನಿಂದಿಸಿದ್ದರು.
    ಈ ಹಿನ್ನೆಲೆಯಲ್ಲಿ ರಹೀಂ ಉಚ್ಚಿಲ್ ಅವರು ಮಂಗಳೂರು ಪ್ರಥಮ ದರ್ಜೆ ( 2 ನೇ ಕೋರ್ಟ್ )ನ್ಯಾಯಿಕ ದಂಡಾಧಿಕಾರಿಗೆ  ಖಾಸಾಗಿ ದೂರು ನೀಡಿ, ಸಚಿವ ರಮಾನಾಥ ರೈ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ದೂರುದಾರರು ಮತ್ತು ಪ್ರತಿವಾದಿಗಳ ವಾದವನ್ನು ಆಲಿಸಿದ ನ್ಯಾಯಧೀಶರು ನಾಳೆ ಮಧ್ಯಾಹ್ನಕ್ಕೆ ತೀಪರ್ನ್ನು ಮುಂದೂಡಿದ್ದಾರೆ.
    Share Information
    Advertisement
    Click to comment

    You must be logged in to post a comment Login

    Leave a Reply