LATEST NEWS
ಟೈಮಿಂಗ್ ವಿಚಾರದಲ್ಲಿ ನಡು ರಸ್ತೆಯಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ಹೊಡೆದಾಟ…!!
ಉಡುಪಿ ಜನವರಿ 13: ಟೈಮಿಂಗ್ ವಿಚಾರದಲ್ಲಿ ಎರಡು ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ನಡು ರಸ್ತೆಯಲ್ಲೇ ರಾಡ್ ಹಿಡಿದು ಖಾಸಗಿ ಬಸ್ ನ ನಿರ್ವಾಹಕ ಗೂಂಡಾ ವರ್ತನೆ ತೋರಿದ್ದಾನೆ.
ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಂಗಳೂರಿನಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಬಸ್ ಕೊಹಿನೂರು ಎಕ್ಸ್ ಪ್ರೆಸ್ ಹಾಗೂ ಟಿಎಂಟಿ ತನ್ವೀರ್ ಬಸ್ ಸಿಬ್ಬಂದಿಗಳ ನಡುವೆ ಟೈಮಿಂಗ್ ವಿಚಾರದಲ್ಲಿ ಗಲಾಟೆ ನಡೆದಿದೆ. ಬಸ್ ಗಳ ಟೈಮಿಂಗ್ ಪಾಲೋ ಮಾಡದ ಕಾರಣ ನಡುವೆ ರಸ್ತೆ ಕೋಹಿನೂರು ಬಸ್ ಅಡ್ಡಗಟ್ಟಿದ ತನ್ವೀರ್ ಟಿಎಂಟಿ ಬಸ್ ಚಾಲಕ ಇರ್ಷಾದ್ ಹಾಗೂ ನಿರ್ವಾಹಕ ಪವನ್ ನಿಂದ ಕೋಹಿನೂರು ಬಸ್ ಚಾಲಕ ಸಫಿಯುಲ್ಲಾ ಮೇಲೆ ಹಲ್ಲೆ ಯತ್ನಿಸಿದ್ದಾರೆ. ಅಲ್ಲದೆ ಎರಡೂ ಬಸ್ನ ಚಾಲಕ ಹಾಗು ನಿರ್ವಾಹಕರ ನಡುವೆ ಗಲಾಟೆ ನಡೆದು ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿದ್ದಾರೆ. ಬಸ್ಗೆ ರಾಡ್ನಿಂದ ಬಡಿಯುವ ದೃಶ್ಯ ವೈರಲ್ ಆಗಿದೆ.
ಎರಡು ಬಸ್ ಗಳಲ್ಲಿ ಪ್ರಯಾಣಿಕರು ಇರುವಾಗಲೇ ಅಜಾಗರೂಕತೆಯಿಂದ ಬಸ್ ಚಲಾಯಿಸಿದಲ್ಲದೇ, ಅಪಾಯಕಾರಿಯಾಗಿ ಅತೀ ವೇಗದಿಂದ ಬಸ್ ಓವರ್ ಟೇಕ್ ಮಾಡಿ ಅಡ್ಡಗಟ್ಟಿ ಗೂಂಡಾಗಿರಿ ತೋರಿದ್ದಾರೆ. ಸದ್ಯ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಎರಡು ಬಸ್ ನ ಚಾಲಕರು ದೂರು ದಾಖಲಿಸಿದ್ದಾರೆ. ಕಾಪು ಪೊಲೀಸರು ಎರಡು ಬಸ್ ಗಳಲ್ಲಿ ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರು ಈ ಖಾಸಗಿ ಬಸ್ ಚಾಲಕರಿಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
You must be logged in to post a comment Login