Connect with us

    DAKSHINA KANNADA

    ಪ್ರಧಾನಿ ಆಗಮನದ ಹಿನ್ನಲೆ: ಮಂಗಳೂರು ನಗರದಲ್ಲಿ ಹೈಅಲರ್ಟ್

    ಮಂಗಳೂರು, ಸೆಪ್ಟೆಂಬರ್ 01: ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಕೊನೆ ಕ್ಷಣದ ಸಿದ್ಧತೆ ಇದೀಗ ನಡೆಯುತ್ತಿದೆ.

    ಪ್ರಧಾನಿ ಅವರು ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಮೈದಾನದಲ್ಲಿ 1 ಗಂಟೆ ಸುಮಾರಿಗೆ ಸಮಾವೇಶಕ್ಕೆ ಆಗಮಿಸಲಿದ್ದು, ಸಂಜೆ 3.15ರವರೆಗೆ ನಡೆಯಲಿದೆ. ಅದಕ್ಕೂ ಮುನ್ನ ಪ್ರಧಾನಿ ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ನಡೆಯುವ ಹಲವು ಕಾಮಗಾರಿಗಳನ್ನು ಉದ್ಘಾಟನೆಗೊಳಿಸಲಿದ್ದಾರೆ.

    ಪ್ರಧಾನಿಗಳ ಕಾರ್ಯಕ್ರಮದಲ್ಲಿ ಒಂದಿಷ್ಟೂ ಲೋಪವಾಗದಂತೆ ಎಚ್ಚರ ವಹಿಸಲು ಈಗಾಗಲೇ ಕೇಂದ್ರೀಯ ಭದ್ರತಾ ದಳದ ತಂಡ ಆಗಮಿಸಿ ಎಲ್ಲೆಡೆ ಭದ್ರತೆ ನಡೆಸಿದೆ. ಶ್ವಾನ ದಳದ ತಂಡವೂ ಆಗಮಿಸಿ ನಗರದ ಇಂಚಿಂಚೂ ಜಾಗವನ್ನು ಪರಿಶೀಲನೆ ನಡೆಸಿದೆ.

    ಇಂದು ಬೆಳಿಗ್ಗೆಯಿಂದಲೇ ಕೇಂದ್ರೀಯ ಭದ್ರತಾ ದಳದ ಅಧಿಕಾರಿಗಳು, ಬಾಂಬ್‌ ಪತ್ತೆ ಹಚ್ಚುವಿಕೆ ತಂಡದ ಅಧಿಕಾರಿಗಳು ಮೋದಿ ಸಂಚರಿಸುವ ಪ್ರಮುಖ ಜಾಗಗಳಲ್ಲಿ ತಪಾಸಣೆಯನ್ನು ನಡೆಸಿದ್ದಾರೆ.

    ಈ ಹಾದಿಯಷ್ಟೇ ಅಲ್ಲದೇ ನಗರದ ಮೇರಿಹಿಲ್‌, ಯೆಯ್ಯಾಡಿ, ಪದವಿನಂಗಡಿ, ಕಾವೂರು, ಕೊಟ್ಟಾರದ ಪ್ರಮುಖ ಜಂಕ್ಷನ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಇನ್ನು ನಗರ ಪೊಲೀಸರು ಕೂಡಾ ಎಲ್ಲಾ ಭದ್ರತೆ ಕೈಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply