LATEST NEWS
ಉಡುಪಿಗೆ ಆಗಮಿಸಿದ ರಾಷ್ಟಪತಿ ರಾಮನಾಥ್ ಕೋವಿಂದ್
ಉಡುಪಿಗೆ ಆಗಮಿಸಿದ ರಾಷ್ಟಪತಿ ರಾಮನಾಥ್ ಕೋವಿಂದ್
ಉಡುಪಿ ಡಿಸೆಂಬರ್ 27: ಪೇಜಾವರ ಶ್ರೀಗಳ ಭೇಟಿಗಾಗಿ ಉಡುಪಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಿದ್ದಾರೆ. ಇಂದು ಉಡುಪಿಯ ಆದಿಉಡುಪಿ ಹೆಲಿಪ್ಯಾಡ್ ವಿಶೇಷ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದಾರೆ.
ಪೇಜಾವರ ಶ್ರೀಗಳ ಸನ್ಯಾಸ ಸ್ವೀಕಾರಕ್ಕೆ ಎಂಬತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳನ್ನು ರಾಷ್ಟ್ರಪತಿಗಳು ಭೇಟಿಯಾಗಲಿದ್ದು, ನಂತರ ಕೃಷ್ಟಮಠಕ್ಕೂ ರಾಷ್ಟ್ರಪತಿಗಳು ಭೇಟಿ ನೀಡಲಿದ್ದಾರೆ. ಆದಿ ಉಡುಪಿ ಹೆಲಿಪ್ಯಾಡ್ ನಿಂದ ಝೀರೋ ಟ್ರಾಫಿಕ್ ಮೂಲಕ ಕೃಷ್ಣಮಠಕ್ಕೆ ರಾಷ್ಟ್ರಪತಿಯವರು ಆಗಮಿಸಿದ್ದಾರೆ.
ರಾಷ್ಟ್ರಪತಿಗಳು ಉಡುಪಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ವಿಶೇಷ ಭದ್ರತಾ ದಳದಿಂದ ಕೃಷ್ಣಮಠ, ರಥಬೀದಿ, ಪೇಜಾವರ ಮಠದ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ರಾಷ್ಟ್ರಪತಿಗಳು ಆಗಮನದ ಹಿನ್ನಲೆಯಲ್ಲಿ ಇಂದು ಸಂಜೆ ತನಕ ಭಕ್ತರಿಗೆ ಶ್ರೀಕೃಷ್ಣ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನಲೆಯಲ್ಲಿ ಉಡುಪಿ ಬಿಕೋ ಎನ್ನುತ್ತಿದೆ. ಉಡುಪಿಯಲ್ಲಿ ಎಲ್ಲಿ ನೋಡಿದರಲ್ಲಿ ಖಾಕಿ ಸರ್ಪಗಾವಲು ಕಾಣಿಸುತ್ತಿದೆ.
Facebook Comments
You may like
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿ ಸಂಸ್ಮರಣಾ ಕಾರ್ಯಕ್ರಮ
ಪೇಜಾವರ ಶ್ರೀಗಳ ತೋಳ್ಬಲ ಪ್ರದರ್ಶನ! 56ರ ಪ್ರಾಯದಲ್ಲೂ 25ರ ಯುವಕರನ್ನು ಮಣಿಸಿದ ಶ್ರೀಗಳು..!?
ವಿಶ್ವೇಶತೀರ್ಥರ ಅಧ್ಯಾತ್ಮ ಶಿಷ್ಯೆಯ ಅಧ್ಯಾತ್ಮಯಾನದ ರೋಚಕ ಕಥಾನಕ ” ಕಡಲತಡಿಯಿಂದ ಹಿಮಗಿರಿಯ ತನಕ ” (ತಪೋವನೀ ಮಾತಾ ಆತ್ಮಕಥೆ ) ಹರಿದ್ವಾರದಲ್ಲಿ ಲೋಕಾರ್ಪಣೆ
ರಾಮ ಮಂದಿರ ನಿರ್ಮಾಣ ಅಭಿಯಾನ ಜನವರಿ 15 ರಿಂದ ಪ್ರಾರಂಭ
ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.
You must be logged in to post a comment Login