Connect with us

    LATEST NEWS

    ಮೋದಿ ಹವಾಕ್ಕೆ ಸಜ್ಜಾಗುತ್ತಿರುವ ಮಂಗಳೂರು

    ಮೋದಿ ಹವಾಕ್ಕೆ ಸಜ್ಜಾಗುತ್ತಿರುವ ಮಂಗಳೂರು

    ಮಂಗಳೂರು ಮೇ 4: ನಾಳೆ ಮೇ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಲಿದ್ದು ಸಮಾವೇಶ ನಡೆಯಲಿರುವ ಕೇಂದ್ರ ಮೈದಾನದಲ್ಲಿ ಸಿದ್ದತೆ ಭರದಿಂದ ಸಾಗಿದೆ.

    ಬಿಜೆಪಿ ರಾಷ್ಟ್ರೀಯ ನಾಯಕರು , ರಾಜ್ಯ ನಾಯಕರು ಹಾಗೂ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಸೇರುವ ನೀರಿಕ್ಷೆ ಇದೆ. ಸಂಸದ ನಳಿನ್ ಕುಮಾರ್ ಸಮಾವೇಶ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ವಿಶೇಷ ಭದ್ರತಾ ಸಿಬ್ಬಂದಿ ಈಗಾಗಲೇ ಮಂಗಳೂರು ತಲುಪಿದ್ದು, ವೇದಿಕೆ ಹಾಗೂ ಸಭಾಂಗಣ ನಿರ್ಮಾಣ ಮಾಡುವಲ್ಲಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

    ಮೈದಾನದ ಸುತ್ತ ಸಿಸಿ ಕ್ಯಾಮರಾ ಸೇರಿದಂತೆ ಎಲ್ಲ ರೀತಿಯ ಭದ್ರತಾ ಕ್ರಮಕೈಗೊಳ್ಳಲಾಗುಕತ್ತಿದೆ. ಅರೇ ಸೇನಾಪಡೆ, ಹೊರ ರಾಜ್ಯದ ಪೊಲೀಸ್ ಪಡೆ, ರಾಪಿಡ್ ಆಕ್ಷನ್ ಫೋರ್ಸ್ ಭದ್ರತೆಗಾಗಿ ಈಗಾಗಲೇ ನಗರಕ್ಕೆ ಆಗಮಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ರಸ್ತೆಯಲ್ಲಿ ಭದ್ರತೆ ಹಾಗೂ ಸುರಕ್ಷತೆ ಹಿನ್ನಲೆಯಲ್ಲಿ ಮೇ 5 ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆ ತನಕ ರಸ್ತೆ ಬದಿ ವಾಹನ ನಿಲುಗಡೆ ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಮಂಗಳೂರು ವಿಮಾನ ನಿಲ್ದಾಣದಿಂದ ಕೆಂಜಾರು- ಮರವೂರು-ಮರಕಡ-ಕಾವೂರು-ಯೆಯ್ಯಾಡಿ- ಸರ್ಕ್ಯೂಟ್ ಹೌಸ್ಸ-ಕದ್ರಿ ಕಂಬಳ – ಬಂಟ್ಸ ಹಾಸ್ಟೆಲ್-ಡಾ. ಅಂಬೇಡ್ಕರ್ ವೃತ್ತ- ಹಂಪನಕಟ್ಟೆ-ಎ.ಬಿ. ಶೆಟ್ಟಿ ವೃತ್ತ ಕೇಂದ್ರ ಮೈದಾನದ ಇಕ್ಕೆಲಗಳಲ್ಲಿ ಎಲ್ಲ ರೀತಿಯ ವಾಹನ ನಿಲುಗಡೆ ನಿಷೇಧಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply