Connect with us

    LATEST NEWS

    ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಪ್ರಮೋದ್ ಮಧ್ವರಾಜ್

    ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಪ್ರಮೋದ್ ಮಧ್ವರಾಜ್

    ಉಡುಪಿ ಫೆಬ್ರವರಿ 16: ಮೀನುಗಾರಿಕೆ, ಯುವಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಇಂದು ಪೇಜಾವರ ಸ್ವಾಮೀಜಿಗಳನ್ನು ಭೇಟಿ ಮಾಡಿ, ಅವರ ಆರೋಗ್ಯವನ್ನು ವಿಚಾರಿಸಿದರು.

    ಪರ್ಯಾಯ ಪೀಠದಿಂದ ಇಳಿದ ತಕ್ಷಣ ಮಂತ್ರಾಲಯಕ್ಕೆ ತೆರಳಿದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ರಸ್ತೆ ಪ್ರಯಾಣ ವೇಳೆ ತೀವ್ರ ಬೆನ್ನು ಮೂಳೆ ನೋವು ಕಾಣಿಸಿಕೊಂಡಿತ್ತು.

    ಮಂತ್ರಾಲಯ ಭೇಟಿ ಮುಗಿಸಿಕೊಂಡು ಹೈದರಾಬಾದ್‌ನಿಂದ ಮಂಗಳೂರಿಗೆ ವಿಮಾನದಲ್ಲಿ ಬರಲು ಶ್ರೀಗಳು ನಿರ್ಧರಿಸಿದ್ದರು. ಅದರಂತೆ ಹೈದರಾಬಾದ್‌ನತ್ತ ಕಾರಿನಲ್ಲಿ ತೆರಳುತ್ತಿದ್ದಾಗ ಕರ್ನೂಲ್‌ ಬಳಿ ವಾಹನ ಬಿರುಸಿನಿಂದ ರಸ್ತೆ ಉಬ್ಬು ದಾಟಿದಾಗ ಸ್ವಾಮೀಜಿ ಅವರಿಗೆ ಮೂಳೆ ನೋವು ಕಾಣಿಸಿಕೊಂಡಿತು. ನಂತರ ತಪಾಸಣೆ ನಡೆಸಿದ ವೈದ್ಯರು 15 ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಪೇಜಾವರ ಶ್ರಿಗಳು ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಇಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ಯರಾಜ್ ಅವರು ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply