Connect with us

    LATEST NEWS

    ಐಟಿ ಟಾರ್ಗೇಟ್ ಗೆ ತಲೆಕೆಡಿಸಿಕೊಳ್ಳಲ್ಲ – ಪ್ರಮೋದ್ ಮಧ್ವರಾಜ್

    ಐಟಿ ಟಾರ್ಗೇಟ್ ಗೆ ತಲೆಕೆಡಿಸಿಕೊಳ್ಳಲ್ಲ – ಪ್ರಮೋದ್ ಮಧ್ವರಾಜ್

    ಉಡುಪಿ ಫೆಬ್ರವರಿ 13: ಐಟಿಗೆ ನಾನು ಟಾರ್ಗೇಟ್ ಎನ್ನುವ ವಿಷಯದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೇ ನೀಡಲ್ಲ ಎಂದು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕಾ ಉಧ್ಯಮಿಗಳ ಮೇಲೆ ನಡೆದ ಐಟಿ ದಾಳಿ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. ನಾನು ಪ್ರತಿಕ್ರಿಯೆ ಕೊಡದಿರುವುದಕ್ಕೂ ಕಾರಣ ಕೊಡುವುದಿಲ್ಲ ಎಂದು ಹೇಳಿದರು. ಐಟಿ ಟಾರ್ಗೇಟ್ ಗೆ ನಾನು ತಲೆ ಕೆಡಿಸಿ ಕೊಳ್ಳುವುದಿಲ್ಲ, ನನ್ನನ್ನು ದೇವರು ಮಾತ್ರ ಟಾರ್ಗೆಟ್ ಮಾಡಬಹುದು ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

    ನಾನು ಚುನಾವಣೆಗೆ ಯಾರಿಂದಲೂ ಹಣ ತೆಗೆದುಕೊಂಡಿಲ್ಲ, ಕಳುಹಿಸಿದವರ ಹಣ ನಾನು ವಾಪಾಸ್ ಕಳುಹಿಸಿದ್ದೇನೆ ಎಂದು ಹೇಳಿದರು. ನನಗೆ ಫಂಡಿಂಗ್ ಮಾಡುವವರ ಅಗತ್ಯವಿಲ್ಲ ಎಂದು ಹೇಳಿದ ಅವರು ನಾನು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತೇನೆ ಎಂದರು.
    ಬಿಜೆಪಿ ಸೇರ್ಪಡೆ ಬಗ್ಗೆ ಕೇಳಿದ ಪ್ರಶ್ನೆಗೆ ಇದು ಪತ್ರಕರ್ತರ ಫೇವರೇಟ್ ಪ್ರಶ್ನೆ, ನಾನು ಬಿಜೆಪಿಗೆ ಸೇರುತ್ತೆನೆ ಎಂದು ಎಲ್ಲೂ ಹೇಳಿಲ್ಲ ಎಂದರು.

    ಕಾಂಗ್ರಸ್ ನ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ದೇವಸ್ಥಾನಗಳ ಭೇಟಿಯನ್ನು ಪ್ರಮೋದ್ ಮಧ್ವರಾಜ್ ಸಮರ್ಥಿಸಿದ್ದಾರೆ. ಹಾರ್ಡ್ ಹಿಂದುತ್ವ ಸಾಫ್ಟ್ ಹಿಂದುತ್ವ ಅಂದ್ರೆ ಏನು ಎಂದು ಕೇಳಿದ ಅವರು ಹಾರ್ಡ್ ಹಿಂದುತ್ವ ಅಂದ್ರೆ ಜನರನ್ನು ಕೊಲ್ಲೋದಾ? ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ನವರು ಹಿಂದೂಗಳಲ್ವಾ,ಕಾಂಗ್ರೆಸ್ನವರು ದೇವಸ್ಥಾನಕ್ಕೆ ಹೋಗ್ಬಾರ್ದಾ, ಕಾಂಗ್ರೆಸ್ನವರು ಅಸ್ಪೃಶ್ಯರಾ? ಎಂದು ಪ್ರಶ್ನೆ ಮಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply