Connect with us

    LATEST NEWS

    ಪೋಟೋ ಗೆ ಫೋಸ್ ನೀಡಿದ್ದಕ್ಕೆ ಅಮಾನತಾದ ಗನ್ ಮ್ಯಾನ್

    ಪೋಟೋ ಗೆ ಫೋಸ್ ನೀಡಿದ್ದಕ್ಕೆ ಅಮಾನತಾದ ಗನ್ ಮ್ಯಾನ್

    ಮಂಗಳೂರು ಜುಲೈ 7: ಭದ್ರತೆಗೆ ನಿಯೋಜಿತರಾದ ಗನ್‍ಮ್ಯಾನ್ ವಿಐಪಿ ಜತೆ ಫೋಟೊಗೆ ಫೋಸ್ ಕೊಟ್ಟು ಕೆಲಸ ಕಳೆದುಕೊಂಡಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡ ರಹೀಂ ಉಚ್ಚಿಲ್ ಅವರ ಗನ್ ಮ್ಯಾನ್ ಮಲ್ಲಿಕಾರ್ಜುನ ಅವರೇ ಸದ್ಯಕ್ಕೆ ಅಮಾನತು ಆದವರು.

    ರಹೀಂ ಉಚ್ಚಿಲ್ ದುಬೈಗೆ ತೆರಳುವ ಸಂದರ್ಭ ಗನ್ ಮ್ಯಾನ್ ಜತೆ ಹಲವು ಫೋಟೊ ಮತ್ತು ಸೆಲ್ಫಿ ತೆಗೆಸಿಕೊಂಡಿದ್ದರು.ಗನ್‍ಮ್ಯಾನ್ ಅವರು ಗನ್ ಮುಂದೆ ಮಾಡಿ ತಾನು ಫೋಸ್ ಕೊಟ್ಟಿದ್ದರು. ರಹೀಂ ಫೋಟೊವನ್ನು ಫೇಸ್ ಬುಕ್‍ನಲ್ಲಿ ಹಾಕಿಕೊಂಡಿದ್ದರು. ಭದ್ರತೆ ನಿಯಮಕ್ಕೆ ಅನುಗುಣವಾಗಿ ಅಂಗರಕ್ಷಕರು ಈ ರೀತಿ ವಿಐಪಿಗಳ ಜತೆ ಫೋಟೊ ತೆಗೆಸಿಕೊಳ್ಳುವಂತಿಲ್ಲಮತ್ತು ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಈ ಕುರಿತು ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಅವರಿಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಅಮಾನತು ಆದೇಶ ಹೊರಡಿಸಿದ್ದಾರೆ.

    ರಹೀಂ ಉಚ್ಚಿಲ್ ಅವರ ಮೇಲೆ ಹಿಂದೊಮ್ಮೆ ಕೊಲೆ ಯತ್ನ ನಡೆದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ರಕ್ಷಣೆಗೆ ಗನ್ ಮ್ಯಾನ್ ನೀಡಲಾಗಿತ್ತು. ಮಲ್ಲಿಕಾರ್ಜುನ ಅವರು ಅಂಗರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ರಹೀಂ ಉಚ್ಚಿಲ್ ಜೂನ್ 23ರಂದು ದುಬೈಗೆ ತೆರಳುವ ಸಂದರ್ಭ ಗನ್ ಮ್ಯಾನ್ ಜತೆ ಫೋಟೊ ತೆಗೆಸಿಕೊಂಡಿದ್ದರು. ಮಾತ್ರವಲ್ಲದೆ ಅದಕ್ಕೆ ಒಕ್ಕಣೆ ಸೇರಿಸಿ, ತಾನು ದುಬೈಗೆ ಹೋಗುವುದಾಗಿ ಫೇಸ್ ಬುಕ್‍ನಲ್ಲಿ ಬರೆದು ಫೋಟೊಗಳನ್ನು ಅಪ್‍ಲೋಡ್ ಮಾಡಿದ್ದರು.

     

    ಇದಾದ ಬಳಿಕ ಗನ್‍ಮ್ಯಾನ್ ಸಶಸ್ತ್ರ ಮೀಸಲು ಪಡೆಗೆ ತನ್ನ ಗನ್ ಒಪ್ಪಿಸಿ, ಯಾರಲ್ಲೂ ಹೇಳದೆ ಕೇಳದೆ ನೇರವಾಗಿ ತನ್ನ ಊರಿಗೆ ಹೊರಟು ಹೋಗಿದ್ದರು. ರಜೆಗೆ ಅರ್ಜಿಯನ್ನು ಕೂಡಾ ಸಲ್ಲಿಸಿರಲಿಲ್ಲ. ಇದು ಮೇಲಧಿಕಾರಿಗಳ ಗಮನಕ್ಕೆ ಬಂದು ಗನ್ ಮ್ಯಾನ್ ನನ್ನು ವಿಚಾರಿಸಿದರು.
    ಆಗ ತಾನು ರಹೀಂ ಉಚ್ಚಿಲರ ಜತೆ ಉಡುಪಿಯಲ್ಲಿ‌ ಇರುವುದಾಗಿ ಗನ್ ಮ್ಯಾನ್ ಹೇಳಿದ್ದರು. ಆದರೆ ವಿದೇಶಕ್ಕೆ ತೆರಳಿದ್ದ ಫೋಟೊವನ್ನು ರಹೀಂ ಉಚ್ಚಿಲ್ ಫೇಸ್ ಬುಕ್ ನಲ್ಲಿ ಹಾಕಿರುವುದರಿಂದ ಗನ್ ಮ್ಯಾನ್ ಸುಳ್ಳು ಹೇಳಿರೋದು ಗೊತ್ತಾಯಿತು. ಕೊನೆಗೂ ಫೇಸ್ ಬುಕ್ ಫೋಟೊ ಗನ್ ಮ್ಯಾನ್ ಗೆ ದುಃಸ್ವಪ್ನವಾಗಿ ಕಾಡಿತು.

    Share Information
    Advertisement
    Click to comment

    You must be logged in to post a comment Login

    Leave a Reply