Connect with us

    DAKSHINA KANNADA

    ಕಡಬದಲ್ಲಿ ಮತದಾನ ಬಹಿಷ್ಕಾರ ಬ್ಯಾನರ್: ಸಚಿವರೊಂದಿಗೆ ಸ್ಥಳೀಯರಿಂದ ಮಾತಿನ ಚಕಮಕಿ

    ಕಡಬ, ಜನವರಿ 02: ಕಡಬ ತಾಲೂಕಿನ ಬಲ್ಯ ಗ್ರಾಮದಲ್ಲಿ ಹಲವೆಡೆ ಮತದಾನ ಬಹಿಷ್ಕಾರ ಎನ್ನುವ ಬ್ಯಾನರ್‌ನ್ನು ಹಾಕಲಾಗಿದ್ದು, ಸಚಿವ ಎಸ್ .ಅಂಗಾರ ಭಾನುವಾರದಂದು ಇಲ್ಲಿಗೆ ಗುದ್ದಲಿ ಪೂಜೆಗೆ ಆಗಮಿಸಿದಾಗ ಸ್ಥಳೀಯ ಆಕ್ರೋಶ ಭುಗಿಲೆದ್ದಿದ್ದು, ಸಚಿವರ ಹಾಗು ಸ್ಥಳೀಯ ನಡುವೆ ಮಾತಿನ ಚಕಮಕಿ ನಡೆದಿದೆ.

    ಸಚಿವರ ಸಹಿತ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಸ್ಥಳೀಯ ಪಂಚಾಯತ್ ಪ್ರಧಾನಿಗಳ ಆದೇಶವನ್ನೂ ಕಡೆಗಣಿಸಿದೆ ಎಂದು ಆರೋಪಿಸಿದರು. ಬಳಿಕ ಸಾರ್ವಜನಿಕರ ಆಕ್ರೋಶದ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು ಸರಕಾರ ಹಣ ಕೊಡುತ್ತಿಲ್ಲ. ನೀವು ಮನವಿ ಕೊಡಿ, ಬಿಡಿ ನಾನು ಮಾಡುವ ಕೆಲಸ ಮಾಡ್ತೇನೆ.

    ನೀವು ಮನವಿ ಕೊಟ್ಟು 4 ವರ್ಷವಾಗಿದೆ ಅಂತ ಒಪ್ಪಿಕೊಳ್ತೇನೆ. ಆದರೆ ಕೋವಿಡ್ ಎಲ್ಲಾ ಬಂದು ಸಮಸ್ಯೆಯಾಯ್ತು ಎಂದು ಸಚಿವ ಎಸ್ .ಅಂಗಾರ ಹೇಳಿದ್ದಾರೆ. ಸಚಿವರ ಈ ರೀತಿಯ ಬೇಜಾಬ್ದಾರಿ ಹೇಳಿಕೆ ಮುಂದಿನ ಚುನಾವಣೆಯಲ್ಲಿ ಯಾವ ರೀತಿಯ ಉತ್ತರವನ್ನು ಕೊಡುತ್ತದೋ ಎನ್ನುವುದನ್ನು ಕಾದು ನೋಡಬೇಕು.

    Share Information
    Advertisement
    Click to comment

    You must be logged in to post a comment Login

    Leave a Reply