Connect with us

    DAKSHINA KANNADA

    ಹೋ ಕ್ವಾರೆಂಟೈನ್ ಸೂಚನೆ ಪಾಲಿಸದ ವ್ಯಕ್ತಿ ವಿರುದ್ಧ ಪೋಲೀಸ್ ಪ್ರಕರಣ 

     

    ಹೋ ಕ್ವಾರೆಂಟೈನ್ ಸೂಚನೆ ಪಾಲಿಸದ ವ್ಯಕ್ತಿ ವಿರುದ್ಧ ಪೋಲೀಸ್ ಪ್ರಕರಣ 

    ಪುತ್ತೂರು,ಎಪ್ರಿಲ್ 1:   ಹೋಂ ಕ್ವಾರಂಟೈನ್ ಸೂಚನೆ ಪಾಲಿಸದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಮನೆಯಲ್ಲೇ ಇರಬೇಕಾಗಿದ್ದ ವ್ಯಕ್ತಿ ಊರಿಡೀ  ಸುತ್ತಾಡುತ್ತಿದ್ದನಲ್ಲದೆ, ಪ್ರಶ್ನಿಸಲು ಬಂದ ಅಧಿಕಾರಿಗಳ ಮೇಲೂ ಸವಾರಿ ಮಾಡಿದ್ದಾನೆ.

    ಸವಣೂರು ಗ್ರಾ.ಪಂ. ವ್ಯಾಪ್ತಿಯ ಆರೇಲ್ತಡಿ ನಿವಾಸಿ ವಿರುದ್ಧ ಇದೀಗ  ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. .

    ಈ ವ್ಯಕ್ತಿ ಕೆಲ ದಿನಗಳ ಹಿಂದೆ ವಿದೇಶದಿಂದ ಆಗಮಿಸಿದ್ದು, 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರುವಂತೆ ಈತನಿಗೆ ಸೂಚಿಸಲಾಗಿತ್ತು.

    ಅದರಂತೆ ಮಾ.30ರಂದು ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾ.ಪಂ ನ ತಂಡ ಭೇಟಿ ನೀಡಿದ ವೇಳೆ ಆ ವ್ಯಕ್ತಿ ಮನೆಯಲ್ಲಿ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ.

    ಈ ಕುರಿತು ಮನೆಯವರಲ್ಲಿ ವಿಚಾರಿಸಿದಾಗ ಈತ ಮನೆಯಿಂದ ಹೊರ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದು, ಬಳಿಕ ಆ ವ್ಯಕ್ತಿಯನ್ನು ಮನೆಗೆ ಬರುವಂತೆ ಸೂಚಿಸಲಾಗಿದೆ.

    ಮನೆಗೆ ಬಂದ  ವ್ಯಕ್ತಿಯನ್ನು  ಮನೆಯಲ್ಲಿರುವಂತೆ ತಿಳಿಸಲಾಗಿತ್ತು.

    ಈ ವೇಳೆ ಅಧಿಕಾರಿಗಳ  ವಿರುದ್ದ  ತೋರಿಸಿದ್ದಾನೆ ಎಂದು ದೂರಲಾಗಿದೆ.

    ಈ ಕಾರಣದಿಂದ ಸರ್ಕಾರದ ಸೂಚನೆ ಧಿಕ್ಕರಿಸಿದಕ್ಕಾಗಿ ಆತನ ಮೇಲೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply