LATEST NEWS
ಉಳ್ಳಾಲ ದರ್ಗಾಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ
ಮಂಗಳೂರು: ನಗರ ನೂತನ ಪೊಲೀಸ್ ಕಮಿಷನರ್ ಆಗಿ ನಿಯುಕ್ತಿಯಾಗಿರುವ ಶಶಿಕುಮಾರ್ ಅವರು ಇಂದು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದರು. ಈ ವೇಳೆ ದರ್ಗಾದ ಆಡಳಿತ ಸಮಿತಿ ಸದಸ್ಯರು ಕಮಿಷನರ್ ಅವರನ್ನು ಸ್ವಾಗತಿಸಿದರು. ಬಳಿಕ ಕಮಿಷನರ್ ಅವರು ದರ್ಗಾದ ಒಳಗಡೆ ಹೋಗಿ ಕ್ಷೇತ್ರದ ವೀಕ್ಷಣೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಉಳ್ಳಾಲ ದರ್ಗಾದ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಸೇರಿದಂತೆ ಸಮಿತಿ ಸದಸ್ಯರು ಕಮಿಷನರ್ ಅವರನ್ನು ಸ್ವಾಗತಿಸಿ ದರ್ಗಾದ ಇತಿಹಾಸವನ್ನು ಕಮಿಷನರ್ ಅವರಿಗೆ ಮನವರಿಕೆ ಮಾಡಿಕೊಟ್ಟರು.
You must be logged in to post a comment Login