ಮಂಗಳೂರು ಜನವರಿ 27: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾಗಿ ಇನ್ನೊಬ್ಬರ ಪ್ರಾಣಕ್ಕೆ ತೊಂದರೆ ಮಾಡುವ ಪ್ರಕರಣಗಳಲ್ಲಿ ಇನ್ನು ಮುಂದೆ ಶಿಕ್ಷಾರ್ಹ ನರಹತ್ಯೆ ಕಾಯ್ದೆಯಡಿ 10 ವರ್ಷಗಳವರೆಗೆ ಜೈಲು ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ವಹಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ನೇತೃತ್ವದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಪ್ರಾಪ್ತರಿಗೆ ವಾಹನ ನೀಡುವುದು ಅಥವಾ ಕುಡಿದು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ನಿಯಮ ಪಾಲನೆಯಾಗುತ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಈ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಈಗಾಗಲೇ ಸಂಚಾರ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಎಲ್ಲರ ಮನೆಯಲ್ಲೂ ಒಬ್ಬನೇ ದುಡಿಯುವ ಸ್ಥಿತಿ ಇರುವಂತದ್ದು, ಸಂಜೆ ದುಡಿಯುವ ವ್ಯಕ್ತಿ ಮನೆಗೆ ಬಂದಿಲ್ಲ ಅಂದರೆ ಸ್ಥಿತಿ ಏನು ಆಗುತ್ತೆ ಎಂದು ಯೋಚಿಸಿ, ಅಪಘಾತದಲ್ಲಿ ಸಾವನಪ್ಪಿದವರಲ್ಲಿ ಹೆಚ್ಚಿನ ಪ್ರಕರಣ ರಸ್ತೆ ದಾಟುವ ವೇಳೆ ಆಗುವಂತದ್ದು, ಈ ಹಿನ್ನಲೆ ಮಂಗಳೂರಿನಲ್ಲಿ ಹೈವೆ ಗಳ ಡಿವೈಡರ್ ಗೆ ಸಂಪೂರ್ಣ ಬ್ಯಾರಿಕೇಡ್ ಮಾಡಬೇಕು ಅಂತ ಅನ್ಕೊಂಡಿದ್ದಿವಿ…ಎಂದರು. ಜನರಿಗೆ ಅಪಘಾತದಲ್ಲಿ ಸಾವನಪ್ಪಿದವರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಆದರೆ ಎಲ್ಲೋ ಒಂದು ರೌಡಿ ಶೀಟರ್ ಸಾವನಪ್ಪಿದರೆ ಅದರಿಂದ ಎನಾದರೂ ಅಡ್ವಾಂಟೆಜ್ ಆಗುತ್ತಾ ನೋಡ್ತಾರೆ ಎಂದರು. ಅಪಘಾತದ ಕೇಸ್ ಗಳನ್ನ ಕಮ್ಯೂನಲ್ ಮಾಡ್ಲಿಕೆ ನೋಡ್ತಾ ಇರ್ತಾರೆ., ಅವರ ಎಲ್ಲಾ ಡಿಟೈಲ್ಸ್ ಡೇಟಾ ಇದ್ದು, ಅವರಿಗೆ ಪೊಲೀಸರು ಎನು ಅಂತ ತೋರಿಸ್ತಿವಿ ಎಂದು ಎಚ್ಚರಿಕೆ ನೀಡಿದರು.