Connect with us

    LATEST NEWS

    ಆಸಿಫ್ ಮೇಲೆ ಹಲ್ಲೆಗೆ ಯತ್ನಿಸಿದ್ದ ಮಂಗಳಮುಖಿಯರು ಅರೆಸ್ಟ್

    ಮಂಗಳೂರು ಫೆಬ್ರವರಿ 16: ಎನ್ಐಟಿಕೆ ಸುರತ್ಕಲ್ ಬಳಿ ಇರುವ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಕಳೆದ ಕೆಲ ದಿನಗಳಿಂದ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಿರುವ ಆಸಿಫ್ ಆಪತ್ಬಾಂಧವ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ.


    ಮಂಡ್ಯ ಪಾಂಡವಪುರದ ವಾಸವಿ ಗೌಡ, ದಾವಣಗೆರೆಯ ಲಿಪಿಕಾ, ಹಾಸನದ ಹಿಮಾ, ಮೈಸೂರಿನ ಆದ್ಯ, ಮಾಯಾ, ರಾಮನಗರದ ಮೈತ್ರಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಸುರತ್ಕಲ್ ಟೋಲ್‌ನಲ್ಲಿ ಅನಧಿಕೃತವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ, ಕೆಲವು ದಿನಗಳಿಂದ ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರ ರಾತ್ರಿ ಆರು ಮಂದಿ ಮಂಗಳಮುಖಿಯರು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಒಡ್ಡಿರುವುದಾಗಿ ಆಸಿಫ್ ಎಂಬವರು ದೂರು ನೀಡಿದ್ದಾರೆ. ಈ ಹಿನ್ನಲೆ 6 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದರು.


    ಮಂಗಳಮುಖಿಯರೂ ಪ್ರತಿದೂರು ನೀಡಿದ್ದು, ತಾವು ಭಿಕ್ಷಾಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವವರು ಹಾಗೂ ಅವರ ಜತೆಗಿದ್ದವರು ತಮ್ಮ ವಿಡಿಯೊ, ಫೋಟೊ ತೆಗೆದು ಛೇಡಿಸಿದ್ದಾರೆ. ರಾತ್ರಿ ಸಮಯ ಹಣ ಕೊಟ್ಟು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply