LATEST NEWS
ಅಜ್ಜಿನಡ್ಕಆರಿಫ್ ಕೊಲೆ ಯತ್ನ ಪ್ರಕರಣ ಪ್ರಮುಖ ಆರೋಪಿ ತಲ್ಲತ್ ಬಂಧನ
ಮಂಗಳೂರು ಸೆಪ್ಟೆಂಬರ್ 19: ಮೀನಿನ ವ್ಯಾಪಾರಿ ರೌಡಿ ಶೀಟರ್ ಆರಿಫ್ ಕೊಲೆ ಯತ್ನ ಪ್ರಕರಣಗ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಫೈಸಲ್ ನಗರ ನಿವಾಸಿ ತಲ್ಲಾತ್ ಯಾನೆ ಫೈಸಲ್ ನಗರ ತಲ್ಲಾತ್ (35) ಎಂದು ಗುರುತಿಸಲಾಗಿದೆ.
ಕೆ.ಸಿ.ರೋಡ್ ಅಜ್ಜಿನಡ್ಕ ಬಳಿ ನೆಲೆಸಿದ್ದ ಕುದ್ರೋಳಿ ನಿವಾಸಿ ಆರೀಫ್ ಮೇಲೆ ಮೇ.26 ರಂದು ದಾಳಿ ನಡೆಸಲಾಗಿತ್ತು. ಮಂಗಳೂರು ಮೀನಿನ ಧಕ್ಕೆಗೆ ಕೆಲಸಕ್ಕೆಂದು ತೆರಳುವ ಸಂದರ್ಭದಲ್ಲಿ ತಲ್ಲಾತ್ ನೇತೃತ್ವದ ಏಳು ಮಂದಿಯ ತಂಡ ತಲವಾರಿನಿಂದ ಕಡಿದು ಕೊಲೆ ಮಾಡಲು ಯತ್ನಿಸಿತ್ತು. ಮೀನಿನ ವ್ಯಾಪಾರ ಸಂಬಂಧಿಸಿದ ಹಣಕಾಸಿನ ವಿಚಾರಕ್ಕೆ ಉಂಟಾದ ವೈಮನಸ್ಸಿನಿಂದ ಆತನ ಮೇಲೆ ದಾಳಿ ನಡೆಸಲಾಗಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು.
ಬಂಧಿತ ಆರೋಪಿ ತಲ್ಲಾತ್ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕುಖ್ಯಾತ ರೌಡಿ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಈ ಹಿಂದೆ ಆಚಿ, ನೌಫಾಲ್, ಅಷ್ಫಾಕ್, ನಿಸಾಕ್, ರಿಫತ್ ಆಲಿ, ರಹೀಮ್ ಎಂಬವರನ್ನು ಬಂಧಿಸಲಾಗಿತ್ತು.
You must be logged in to post a comment Login